’ಉತ್ತರ’ ಮತ್ತು ’ಅಭ್ಯಂಜನ’ ಎಂಬ ಎರಡು ಚಿತ್ರಗಳ ಟ್ರೇಲರ್ ಲೋಕಾರೆ್ಣ ಸಮಾರಂಭ
The trailer of two films 'Uttara' and 'Abhyanjana' was launched at a public function.
ಟ್ರೇಲರ್ ಬಿಡುಗಡೆ ಸಂಭ್ರಮದಲ್ಲಿ ’ಉತ್ತರ’ ಮತ್ತು ’ಅಭ್ಯಂಜನ’ಚಂದನವನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ’ಉತ್ತರ’ ಮತ್ತು ’ಅಭ್ಯಂಜನ’ ಎಂಬ ಎರಡು ಚಿತ್ರಗಳ ಟ್ರೇಲರ್ ಲೋಕಾರೆ್ಣ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂನ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಹಿರಿಯ ನಟ ಸುಂದರರಾಜ್ ಮತ್ತು ಡಾ.ರಾಜ್ ಕುಟುಂಬದ ಗೋವಿಂದರಾಜ್ ದಂಪತಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಚಿತ್ರಗಳಲ್ಲಿ ಹಾಡುಗಳು ರಹಿತ ಹಲವು ವಿಶೇಷತೆಗಳು ಇರುವುದು ಕಾಕತಾಳೀಯವಾಗಿದೆ. ಹೌದು ಎರಡು ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ನಾಯಕ, ಸಿರಿ ಮ್ಯೂಸಿಕ್ ಟ್ರೇಲರ್ ಹಕ್ಕುಗಳನ್ನು ಖರೀದಿಸಿರುವುದು,
ಪುರೋಹಿತ ಫಿಲಂಸ್ರವರು ಒಂದೇ ದಿನ ಎರಡು ಚಿತ್ರ ಬಿಡುಗಡೆ ಮಾಡುತ್ತಿರುವುದು, ಭಾರತೀಯ ಚಿತ್ರರಂಗದಲ್ಲೇ ದಾಖಲೆಯಾಗಿದೆ. ಅಂದಂಗೆ ಡಾ.ರಾಜ್ಕುಮಾರ್, ಎಂಜಿಆರ್, ಡಾ.ವಿಷ್ಣುವರ್ಧನ್ ಸೇರಿದಂತೆ ಬಹುತೇಕ ಸ್ಟಾರ್ ಕಲಾವಿದರಿಗೆ ಕೇಶವಿನ್ಯಾಸ ಮಾಡಿರುವ ನಾಗೇಶ್ವರರಾವ್ ಸಣ್ಣ ಪಾತ್ರ ಮಾಡುವ ಜತೆಗೆ ಶ್ರೀ ಲಕ್ಷೀ ನರಸಿಂಹ ಆರ್ಟ್ಸ ಬ್ಯಾನರ್ನಡಿ 26 ಮತ್ತು 27ನೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಗರಾಜ್ ಶಾಂಡಿಲ್ಯ ಹಾಗೂ ಬಿ.ಎಸ್.ಮಂಜುನಾಥ್ ಸಹ ನಿರ್ಮಾಪಕರು. ಈ ಎರಡು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಛಾಯಾಗ್ರಹಣದ ಜೊತೆಗೆ ನಿರ್ದೇಶನ ಮಾಡಿದ್ದಾರೆ ದಿನೇಶ್ ಬಾಬು. ನಾರಾಯಣ ಸ್ವಾಮಿ ಕಥಾ ನಾಯಕ.ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ತಾರಾ, ’ನಿರ್ಮಾಪಕರು ಇಲ್ಲಿ ದುಡಿದುದನ್ನು ಇಲ್ಲಿಯೇ ಖರ್ಚು ಮಾಡಿರುವುದು ಸ್ವಾಗತಾರ್ಹ.
ದಿನೇಶ್ ಬಾಬು ಅವರು ಕ್ಲಿಷ್ಟವಾದ ವಿಷಯಗಳು, ಅಂದರೆ ಕೌಟಂಬಿಕ ಮಾಲ್ಯಗಳು ಹಾಗೂ ಕಾನೂನುದಲ್ಲಿ ಪಾಲಿಸಲೇ ಬೇಕಾದ ನಿಯಮಗಳ ಮಧ್ಯೆ ಇರುವ ಸಣ್ಣದೊಂದು ಏಳೆಯನ್ನು ಕಾನೂನುಬದ್ದವಾಗಿ ಜನರಿಗೆ ಹೇಗೆ ಹೇಳಬಹುದು ಎಂಬುದನ್ನು ಅರ್ಥಪೂರ್ಣವಾಗಿ ’ಉತ್ತರ’ದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದರೆ. ನ್ಯಾಯಧೀಶೆಯಾಗಿ ಇಂತಹ ಕೇಸ್ ಕಣ್ಮುಂದೆ ಬಂದಾಗ ಆಕೆ ಅದನ್ನು ಯಾವ ರೀತಿ ನಿಭಾಯಿಸಬಲ್ಲಳು ಎನ್ನುವ ಪಾತಕ್ಕೆ ಬಣ್ಣ ಹಚ್ಚಿದ್ದೇನೆ. ನಾನಿನ್ನು ಚಿತ್ರ ನೋಡಿಲ್ಲ. ಮಾಧ್ಯಮದವರು ವೀಕ್ಷಿಸಿ ವಿಮರ್ಶೆ ಕೊಡಬೇಕೆಂದು’ ಕೋರಿಕೊಂಡರು. ಮಂಗಳೂರು ಮೂಲದ ಸಂಪ್ರತಿ ಆಳ್ವ ಈ ಚಿತ್ರದ ನಾಯಕಿ. ಉಳಿದಂತೆ ಅಶ್ವಿನಿ ಗೌಡ, ಅರ್ಜುನ್ ಚೌಹ್ವಾನ್, ನಿಧಿ ಚಕ್ರವರ್ತಿ ಮುಂತಾದವರು ತಾರಾಗಣದಲ್ಲಿ ಇದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ವಸಂತ್ ಕುಮಾರ್ ಸಂಕಲನವಿದೆ.
ಇನ್ನು ’ಅಭ್ಯಂಜನ’ ಚಿತ್ರದ ಕುರಿತು ಹೇಳುವುದಾದರೆ, ಇದೊಂದು ವಸ್ತು ನಿಷ್ಠ ಅಂಶಗಳನ್ನು ಒಳಗೊಂಡ ಚಿತ್ರ. ಎಣ್ಣೆ ಸ್ನಾನ ಮಾಡುವುದಕ್ಕೆ ಶೀರ್ಷಿಕೆ ಅರ್ಥ ಕೊಡುತ್ತದೆ. ತಮಿಳು ನಾಡಿನ ಗ್ರಾಮೀಣ ಜಿಲ್ಲೆಗಳ ಕೆಲವು ಭಾಗಗಳಲ್ಲಿ ತಮ್ಮ ಸ್ವಂತ ಕುಟುಂಬವು ಇಂದಿಗೂ ಇಂತಹ ಪದ್ದತಿಯನ್ನು ಪಾಲಿಸುತ್ತದೆ. ವೃದ್ದರು ಅನಾರೋಗ್ಯ ಪೀಡಿತರಾದಲ್ಲಿ, ಅವರನ್ನು ನೋಡಿಕೊಳ್ಳಲು ಕಷ್ಟವಾದರೆ, ಅಂತಹವರನ್ನು ಅಭ್ಯಂಜನ ಮೂಲಕ ದಯಾ ಮರಣ ಕಲ್ಪಿಸುತ್ತಾರೆ. ಕಥೆಯಲ್ಲಿ ಕರ್ನಾಟಕ ಮೂಲದ ದಂಪತಿಗಳು ಆ ಭಾಗದಲ್ಲಿ ವಾಸ ಮಾಡುತ್ತಿದ್ದು, ಇಂತಹ ಸಂದರ್ಭ ಬಂದಾಗ ಹೇಗೆ ಎದುರಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ಅಪೂರ್ವ ಭಾರದ್ವಾಜ್ ನಾಯಕಿ. ವೃದ್ದನಾಗಿ ಕರಿಸುಬ್ಬು ಮುಂತಾದವರು ನಟಿಸಿದ್ದಾರೆ. ಚಾಮರಾಜನಗರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಡಾ.ಸಿ. ಮಹಾರಾಜ್ ಸಂಗೀತ, ಈಶ್ವರ್ ಸಂಕಲನ ನಿರ್ವಹಿಸಿದ್ದಾರೆ.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 