ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಸಮುದಾಯದ ಮೇಲಿದೆ: ಅಶೋಕ ಪೂಜಾರ

ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಸಮುದಾಯದ ಮೇಲಿದೆ: ಅಶೋಕ ಪೂಜಾರ The responsibility of protecting children's rights lies with the community: Ashok Pujara

        ರಾಣಿಬೆನ್ನೂರು:10ಮಕ್ಕಳ ಸವಾಂರ್ಗಣಿಯ ಅಭಿವೃದ್ಧಿ ಆಗಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಸಮುದಾಯದವರು ಸಹಕರಿಸಿದಾಗ ಮಾತ್ರ  ಮಕ್ಕಳ ಹಕ್ಕುಗಳ ರಕ್ಷಣೆಯ ಮಾಡಲು ಸಾಧ್ಯವಿದೆ ಎಂದು ಪಿಡಿಓ ಅಶೋಕ್ ಪೂಜಾರ್ ಹೇಳಿದರು 

   ತಾಲೂಕಿನ ಕಾಕೋಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಬುಧವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು,  ಮಕ್ಕಳ ಲಾಲನೆ ಪಾಲನೆ ರಕ್ಷಣೆ ಸುರಕ್ಷತೆ ಆರೋಗ್ಯ  ಈ ನಾಲ್ಕು ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು, 

  ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತೆ  ಭುವನೇಶ್ವರಿ ಹಿರೇಮಠ  ಮಾತನಾಡಿ, ಬಾಲ್ಯ ವಿವಾಹ  ಮಕ್ಕಳ ಮೇಲಿನ ದೌರ್ಜನ್ಯ ಮಕ್ಕಳ ಹಕ್ಕುಗಳು ಇತ್ಯಾದಿ ವಿಷಯ ಕುರಿತು ಗ್ರಾಮ ಸಭೆಯಲ್ಲಿ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿದರು  ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತ ಕಿವುಡನವರ ಅವರು, ಮಕ್ಕಳ ಹಕ್ಕುಗಳ ರಕ್ಷಣಾ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಿದರು  

        ತಾಲೂಕ ನರೇಗಾ ಐಇಸಿ ಸಂಯೋಜಕ ದಿಂಗಾಲೇಶ್ ಅಂಗೂರ್ ಮಾತನಾಡಿ, ಪಂಚಾಯತ್ ರಾಜ್ ಮೂರು ಹಂತದ ಸ್ಥಳೀಯ ಆಡಳಿತ ವ್ಯವಸ್ಥೆ ಇದರಲ್ಲಿ ಮಕ್ಕಳಿಗೆ ಕೊಡತಕ್ಕಂಥ ಸೌಲಭ್ಯಗಳ ಕಲಿಕಾ ಪೂರಕ ವಾತಾವರಣ ನಿರ್ಮಿಸುವಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಕುರಿತು ಮಕ್ಕಳಿಗೆ ಸಮಗ್ರ ಮಾಹಿತಿ ತಿಳಿಸಿದರು  

    ಗ್ರಾಮ ಉಪಾಧ್ಯಕ್ಷ ಶಾಂತವ್ವ  ಕನ್ನಜ್ಜನವರ, ಸದಸ್ಯರಾದ ನೀಲಪ್ಪ ಮೋಟೆಬೆನ್ನೂರ್ ಜಗದೀಶ ಚಪ್ರದ, ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಕಡೆಮನಿ, ಬಿಎಫ್‌ಟಿ ಮಂಜುನಾಥ ಚಲವಾದಿ, ಪ್ರಧಾನ ಗುರುಗಳು, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗ್ರಾಪಂಸಿಬ್ಬಂದಿಗಳು  ಉಪಸ್ಥಿತರಿದ್ದರು