ವಿಜೃಂಭಣೆಯಿಂದ ಜರುಗಿದ ಏಳುಮಕ್ಕಳ ತಾಯಿಬಾಯಿಯ ಜಾತ್ರಾ ಮಹೋತ್ಸವ
The grand celebration of the seven children's mother-in-law's fair was held with great enthusiasm
ರಾಯಬಾಗ, 25 : ತಾಲೂಕಿನ ಜಲಾಲಪುರ ಗ್ರಾಮದ ಏಳುಮಕ್ಕಳ ತಾಯಿಬಾಯಿ ಜಾತ್ರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು. ಬುಧವಾರ ನಡೆದ ವಿವಿಧ ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜೋಡು ಎತ್ತಿನ ಗಾಡಿ ಶರ್ಯತ್ತು: ಜಲಾಲಪುರದ ವಸಂತ ಹವಾಲ್ದಾರ ಪ್ರಥಮ, ಭಿರಡಿಯ ತಾಯಿಬಾಯಿ ಪ್ರಸನ್ನ ದ್ವಿತೀಯ ಮತ್ತು ರಾಯಬಾಗದ ಅಕ್ಷಯ ಪೂಜಾರಿ ತೃತೀಯ ಬಹುಮಾನ ಪಡೆದರು.ಜೋಡು ಕುದುರೆ ಗಾಡಿ ಶರ್ಯತ್ತು: ಭಿರಡಿಯ ರಾಮಚಂದ್ರ ಗೌಳಿ ಪ್ರಥಮ, ಮಹಾದೇವ ಈಟೇಕರಿ ದ್ವಿತೀಯ ಮತ್ತು ಲಗಮಣ್ಣ ಹಿಡಕಲ ತೃತೀಯ ಬಹುಮಾನ ಪಡೆದರು. ಕುದುರೆ ಶರ್ಯತ್ತು: ಚಿಂಚಲಿಯ ಕುಮಾರ ಪೂಜಾರಿ ಪ್ರಥಮ, ಕಲ್ಲಪ್ಪ ಖಿಲಾರೆ ದ್ವಿತೀಯ ಹಾಗೂ ಸುರೇಶ ಚಿಂಚಲಿ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಸಗೌಡ ಪಾಟೀಲ, ಮಲ್ಲು ಮುರಚಿಟ್ಟೆ, ಬಂಡು ಹವಾಲ್ದಾರ, ರಾವಸಾಹೇಬ ಹೇರವಾಡೆ, ರಾಜು ಜಾಧವ, ಸಾವಂತ ಪಾಟೀಲ, ರಘುನಾಥ ಶೇಲಾರ, ಪ್ರಕಾಶ ನಿಂಬಾಳ್ಕರ ಸೇರಿ ಜಾತ್ರಾ ಕಮಿಟಿ ಸದಸ್ಯರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 