ಜಗತ್ತಿನ ಎಲ್ಲ ಧರ್ಮಗಳ ಸಾರ ಒಂದೇ : ಸಾಹಿತಿ ಕುಂ. ವೀರಭದ್ರ​‍್ಪ

ಜಗತ್ತಿನ ಎಲ್ಲ ಧರ್ಮಗಳ ಸಾರ ಒಂದೇ : ಸಾಹಿತಿ ಕುಂ. ವೀರಭದ್ರ​‍್ಪ  The essence of all the world's religions is the same: Writer Kum. Veerabhadrappa


ಹೂವಿನಹಡಗಲಿ, ಸೆ.5: ಜಗತ್ತಿನ ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು, ಪರರ ಒಳಿತನ್ನು ಬಯಸುವುದೇ ಎಲ್ಲ ಧರ್ಮಗಳ ಮೂಲ ತತ್ವವಾಗಿದೆ ಎಂದು ಖ್ಯಾತ ಬರಹಗಾರ ಹಾಗೂ ಸಾಹಿತಿ ಕುಂ. ವೀರಭದ್ರ​‍್ಪ ಹೇಳಿದರು.  ಪಟ್ಟಣದ ತಿಪ್ಪಾಪುರ ಗ್ರಾಮದ ಸಮೀಪದ ಮಸ್ದಾರ್ ಶಿಕ್ಷಣ ಸಂಸ್ಥೆ ಹಾಗೂ ಎಸ್‌ಎಸ್‌ಎಫ್ ವತಿಯಿಂದ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಸಾಹಿತ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಯಾವುದೇ ಭೇದವಿಲ್ಲದೆ, ನಮ್ಮೆಲ್ಲರಲ್ಲೂ ಅಡಗಿರುವ ಮಾನವೀಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜಗತ್ತಿನ ಎಲ್ಲ ಧರ್ಮಗಳ ಸಾರವೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು ಎಂದರು.  

ಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಸೂಫಿಯಾನ್ ಸಖಾಫಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹಾಗೂ ಜನರೊಂದಿಗೆ ಮುಕ್ತವಾಗಿ ಮಾತನಾಡುವ ಧೈರ್ಯ ಬೆಳೆಸಿಕೊಳ್ಳಲು ಎಸ್‌ಎಸ್‌ಎಫ್ ಸಂಘಟನೆ ನನಗೆ ಸ್ಫೂರ್ತಿಯಾಗಿದೆ ಎಂದರು.  ಮಸ್ದಾರ್ ಶಿಕ್ಷಣ ಸಂಸ್ಥೆಯ ಮುಖಂಡ ವಾರದ್ ಗೌಸ್ ಮೊಯ್ದಿನ್, ಬಿಸಿಸಿ ಬ್ಯಾಂಕ್ ನಿರ್ದೇಶಕ ಆಗೋಳ ಆನಂದ ಸೇರಿದಂತೆ ಹಲವು ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.