ರಾಜ್ಯದ ಗಡಿ ಕುಗ್ರಾಮದ ಶಿವಾನಂದ ಬಡಿಗೇರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ರ್ಯಾಂಕ್..!
Shivananda Badigera, a village on the state's border, ranks 19050th in the country in the MBBS entra
ರಾಜ್ಯದ ಗಡಿ ಕುಗ್ರಾಮದ ಶಿವಾನಂದ ಬಡಿಗೇರ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ರ್ಯಾಂಕ್..!
ಕಾಗವಾಡ 14 : ಅತೀ ಹಿಂದೂಳಿದ ವಿಶ್ವಕರ್ಮ ಸಮಾಜದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಸೌಲಭ್ಯಗಳಿಲ್ಲದ ಕುಗ್ರಾಮದಲ್ಲಿ ಸರ್ಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳದೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು, ಇಂದು ದೇಶ ಮಟ್ಟದ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 19050 ಮತ್ತು ರಾಜ್ಯಕ್ಕೆ 1030 ರ್ಯಾಂಕ್ ಪಡೆದು, ಆಯ್ಕೆಯಾಗಿದ್ದಕ್ಕೆ ನಮ್ಮ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾನೆಂದು ವಿಶ್ವಕರ್ಮ ಸಮಾಜದ ಮುಖಂಡ ಶ್ರೀಶೈಲ ಬಡಿಗೇರ ಹೇಳಿದರು. ಅವರು, ರವಿವಾರ ದಿ. 14 ರಂದು ತಾಲೂಕಿನ ಮೋಳೆ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದಿಂದ ಎಂಬಿಬಿಎಸ್ ಪದವಿಗೆ ಆಯ್ಕೆಗೊಂಡಿರುವ ಶಿವಾನಂದ ಮಹಾದೇವ ಬಡಿಗೇರ ಅವರಿಗೆ ಏರಿ್ಸದಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ವಿಶ್ವಕರ್ಮ ಸಮಾಜ ಅತ್ಯಂತ ಬಡತನದಿಂದ ಕೂಡಿದ್ದು, ತಮ್ಮ ಕಲೆಯ ಮೂಲಕ ಜೀವನ ಸಾಗಿಸುತ್ತಿದ್ದು, ಇಂತಹ ಕುಟುಂಬದಲ್ಲಿ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇ. 93 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಇತ್ತಿಚಿಗೆ ನಡೆದ ನಿಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮೈಸೂರಿನ ಮೆಡಿಕಲ್ ಕಾಲೇಜಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. ಶಿಕ್ಷಕ ಮಹಾದೇವ ಬಡಿಗೇರ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟೊದ ಗಡಿ ಭಾಗ, ಮೂಲಸೌಲಭ್ಯ ವಂಚಿತ ಮೋಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ, ನಂತರ ಜಮಖಂಡಿಯ ಕಾಲೇಜಿನಲ್ಲಿ ಕಷ್ಟಪಟ್ಟು ಪಿಯುಸಿ ಓದಿ, ಶೇ. 93 ರಷ್ಟು ಅಂಕ ಪಡೆದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ತರಬೇತಿಯನ್ನು ಪಡೆಯದೇ ನಿಟ್ ಪರೀಕ್ಷೆಯಲ್ಲಿ ಎಂಬಿಬಿಎಸ್ಗೆ ಅರ್ಹತೆ ಪಡೆದಿರುವುದು ನಮ್ಮ ಗ್ರಾಮದ ಹಾಗೂ ನಮ್ಮ ಸಮಾಜದ ಹಿರಿಮೆಯನ್ನು ಹೆಚ್ಚಿಸಿದ್ದಾನೆ ಎಂದರು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಶಿವಾನಂದ ಬಡಿಗೇರ, ಸತತ ಪರಿಶ್ರಮ, ಓದು, ತಂದೆ-ತಾಯಿ, ಶಿಕ್ಷಕರ ಮಾರ್ಗದರ್ಶನ ಪಡೆದು, ಈ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಯಾವುದೇ ಪರೀಕ್ಷೆ ಎದುರಿಸಲು ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಓದುವ ಛಲವೊಂದಿದ್ದರೇ ಎಂತಹ ಸಾಧನೆಯನ್ನು ಮಾಡಬಹುದಾಗಿದೆ ಎಂದರು. ಈ ವೇಳೆ ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀಶೈಲ ಬಡಿಗೇರ, ಮಹಾದೇವ ಬಡಿಗೇರ, ಭಾಗೀರಥಿ ಬಡಿಗೇರ ಸುಧಾಕರ ಬಡಿಗೇರ, ಅಣ್ಣಪ್ಪಾ ಬಡಿಗೇರ, ರವೀಂದ್ರ ಬಡಿಗೇರ, ವಿನೋದ ಮಹೇಶ್ಕರ, ತಾತ್ಯಾಸಾಬ ಬಡಿಗೇರ, ಕುಮಾರ ಬಡಿಗೇರ, ಆನಂದ ಕಂಬಾರ, ಸಂಜಯ ತೇಜುಮಾಳಿ ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು. ಫೋಟೋ ಶಿರ್ಷಿಕೆ: 14 ಕಾಗವಾಡ 01- ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ಶಿವಾನಂದ ಬಡಿಗೇರ ಎಂಬಿಬಿಎಸ್ ಪದವಿಗೆ ಆಯ್ಕೆಗೊಂಡ ಪ್ರಯುಕ್ತ ಸಮಾಜದ ವತಿಯಿಂದ ಸನ್ಮಾನಿಸುತ್ತಿರುವ ಚಿತ್ರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 