ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಸಹಕಾರಿಗೆ 2.11 ಕೋಟಿ ನಿವ್ಹಳ ಲಾಭ: ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ಮಾಹಿತಿ..!
Shiraguppi's Jinnapanna Chowgule Lal Bahadur Cooperative has a net profit of 2.11 crores: President
ಲೋಕದರ್ಶನ ವರದಿ
ಕಾಗವಾಡ 04: ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ ಮಾ. 31 ಕ್ಕೆ ರೂಪಾಯಿ 2.11 ಕೋಟಿ ನಿವ್ಹಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ.
ಅವರು ಶನಿವಾರ ದಿ. 04 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಸಹಕಾರಿಯ ಪ್ರಧಾನ ಕಚೇರಿಯ ಸಭಾಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ದಿ. ಜಿನ್ನಪ್ಪಣ್ಣಾ ಚೌಗುಲೆ ಅವರ ದೂರದಷ್ಟಿಯ ಫಲವಾಗಿ, ಗ್ರಾಮೀಣ ಭಾಗದ ಸಣ್ಣ ಮತ್ತು ಮಧ್ಯಮ ರೈತರ ಮತ್ತು ಉದ್ಯಮಿದಾರಿಗೆ ಆರ್ಥಿಕ ಸಹಕಾರ ನೀಡುತ್ತ ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಯ ಅವರ ಕನಸು ಇಂದು ಸಾಕಾರಗೊಳ್ಳುತ್ತಿದ್ದು, ಸಹಕಾರಿಯು ಪ್ರಗತಿಯತ್ತ ದಾಪುಗಾಲು ಹಾಕುತ್ತ ಪ್ರಸಕ್ತ ಕಾಗವಾಡ,
ಅಥಣಿ, ಚಿಕ್ಕೋಡಿ, ರಾಯಬಾಗ ಮತ್ತು ಜಮಖಂಡಿ ತಾಲೂಕಿನಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಸಹಕಾರಿಯು ಪ್ರಸಕ್ತ ಶಿರಗುಪ್ಪಿ, ಮೋಳೆ, ಅಥಣಿ, ಇಂಗಳಿ, ಐನಾಪೂರ, ಶೇಡಬಾಳ, ಚಿಂಚಲಿ, ಉಗಾರ ಖುರ್ದ, ಕಾಗವಾಡ, ಕಟಕಭಾವಿ, ತೇರದಾಳ, ಗುಂಡೆವಾಡಿ ಹೀಗೆ ಒಟ್ಟು 12 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ತಮ್ಮ ನಿಗಧಿತ ಗುರಿ ಮುಟ್ಟುವದರೊಂದಿಗೆ ಲಾಭದಲ್ಲಿವೆ ಎಂದರು.
ಸಿಇಓ ವಿದ್ಯಾಧರ ಚೌಗುಲೆ ಮಾತನಾಡಿ, ಸಹಕಾರಿಯು ಒಟ್ಟು ರೂ. 167 ಕೋಟಿ ಠೇವು ಸಂಗ್ರಹಿಸಿ, 93 ಕೋಟಿ ಸಾಲ ವಿಧಿಸಿದೆ. ಅದರಂತೆ ರೂ. 84 ಕೋಟಿ ಗುಂತಾವಣೆಗಳಿದ್ದು, ರೂ. 16.5 ಕೋಟಿ ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಈ ವೇಳೆ ಸಹಕಾರಿಯ ಉಪಾಧ್ಯಕ್ಷೆ ಸೌ. ಶಾಲನ ಸರ್ಜೆರಾವ ಪಾಟೀಲ, ಚಿಕ್ಕೋಡಿ ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ನಿರ್ದೇಶಕರಾದ ಭಾವುಸಾಬ ಕುರುಂದವಾಡೆ, ಸುರೇಶ ಚೌಗುಲೆ, ಅಪ್ಪಾಸಾಬ ಶಿರಗುಪ್ಪೆ, ಮಹಾವೀರ ಅಕಿವಾಟೆ ಮತ್ತು ಸಲಹೆಗಾರರಾದ ಅಜೀತ ನಾಂದಣಿ ಸೇರಿದಂತೆ ಎಲ್ಲ ಶಾಖೆಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 