ಸದ್ಗುರುವಿಗೆ ಕಾವ್ಯದಿಂಚರ ಗ್ರಂಥ ಲೋಕಾರೆ್ಣ
Sadhguru's Kavyadinchara Granth is a world-renowned
ದೇವರಹಿಪ್ಪರಗಿ 30: ತಾಲೂಕಿನ ಭೈರವಾಡಗಿ(ಘೋಡಗೇರಿ) ಗ್ರಾಮದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ ಸಂಪಾದನ ಕಾವ್ಯ ಸಂಕಲನ ದೇವರಹಿಪ್ಪರಗಿ ತಾಲೂಕು ಸಾಹಿತ್ಯ ಸಮ್ಮೇಳನದ ಮಾಜಿ ಸರ್ವಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಸಂಗಮೇಶ ಕೆರೆಪ್ಪಗೋಳ ವಿರಚಿತ "ಸದ್ಗುರುವಿಗೆ ಕಾವ್ಯದಿಂಚರ"ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಹನುಮಾನ್ ಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ರವಿವಾರದಂದು ಬಿಡುಗಡೆಗೊಂಡಿತು.ಸ್ಥಳೀಯ ಮಠದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಸಾನಿಧ್ಯವನ್ನು ಕಡಕೋಳ ಗ್ರಾಮದ ವೇ.ಮೂ ಮಹಾಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿ ಭೈರವಾಡಗಿ (ಘೋಡಗೇರಿ) ಗ್ರಾಮದ ಪ.ಪೂ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ "ಸದ್ಗುರುವಿಗೆ ಕಾವ್ಯದಿಂಚರ" ಸಂಪಾದನ ಕಾವ್ಯ ಸಂಕಲನ 9ನೇ ಕೃತಿಯು ಸಂಗಮೇಶ ಕೆರೆಪ್ಪಗೋಳ ವಿರಚಿತ ಕೃತಿಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾಳವಾರ ಗ್ರಾಮದ ವೇ.ಮೂ ಬಸಯ್ಯ ಮಹಾಸ್ವಾಮಿಗಳು ವಹಿಸಿದ್ದರು.ಸಂಪಾದಕರು, ಹಿರಿಯ ಕಲಾವಿದ-ವಿದ್ವಾಂಸರಾದ ಸಂಗಮೇಶ ಕೆರೆಪ್ಪಗೋಳ ಅವರ ವಿರಚಿತ 9ನೇ ಕೃತಿ ಲೋಕಾರೆ್ಣ ಮಾಡಲಾಯಿತು.ಗ್ರಂಥ ಮುದ್ರಣ ಲೋಕಾರ್ಣಕ್ಕೆ ಗ್ರಾಮದ ಅರಕ್ಷಕರಾದ ರಾಘವೇಂದ್ರ ಗು. ದೇವೂರ ದಾಸೋಹ ಸೇವೆಯನ್ನು ನೀಡಿದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಸಾಹಿತ್ಯ ಆಸಕ್ತದಾರರು ಇದ್ದರು.ಕಾರ್ಯಕ್ರಮದ ನಿರೂಪಣೆ ಆಯ್.ಎಲ್.ಶಾಬಾದಿ ಹಾಗೂ ಸಿ.ಕೆ. ಕಿರಣಗಿ ಸ್ವಾಗತಿಸಿ, ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 