ಮಾಜಿ ಸೈನಿಕರ ಮಹಿಳಾ ಘಟಕದಿಂದ ರಕ್ಷಾ ಬಂಧನ
Raksha Bandhan from the women's unit of ex-servicemen
ಮಾಜಿ ಸೈನಿಕರ ಮಹಿಳಾ ಘಟಕದಿಂದ ರಕ್ಷಾ ಬಂಧನ
ಬೆಳಗಾವಿ 11: ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಮಹಿಳಾ ಘಟಕದ ವತಿಯಿಂದ ನಗರದ 2ನೇ ಕೆ ಎಸ್ ಆರ್ ಪಿ ಬಟಾಲಿಯನ್ ನಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ರಕ್ಷಾ ಬಂಧನ ಕಾರ್ಯ ನೆರವೇರಿತ್ತು.
ದೇಶದ ರಕ್ಷಣೆಗಾಗಿ ಗಡಿಯಲ್ಲಿ ಸೈನಿಕರು ಹಗಲಿರುಳು ಶ್ರಮಿಸುತ್ತಾರೆ. ಜೊತೆಯಲ್ಲಿ ಆರಕ್ಷಕರು ಕಾನೂನು ಹಾಗೂ ಜನ ಸಾಮಾನ್ಯರ ಸೇವೆಯಲ್ಲಿ ನಿರತರಾಗಿದ್ದು, ಅವರ ಸೇವೆಯು ಅತ್ಯಮೂಲ್ಯವಾದೆ. ನಮ್ಮ ಸಹೋದರಾದ ಸೈನಿಕರು , ಪೊಲೀಸ್ ರ ಜೊತೆಯಲ್ಲಿ ಮಹಾಒಕ್ಕೂಟದ ವತಿಯಿಂದ ಆರಕ್ಷಕರಿಗೆ ರಕ್ಷಾಬಂಧನ ಆಚರಿಸುತ್ತಿರುವುದು ಅತೀವ ಸಂತೋಷವಾಗಿದೆ ಎಂದು ಮಹಾಒಕ್ಕೂಟದ ಜಿಲ್ಲಾದ್ಯಕ್ಷ ಜಗದೀಶ ಪೂಜೇರಿ ತಿಳಿಸಿದರು.
2ನೇ ಕೆ ಎಸ್ ಆರ್ ಪಿ ಬಟಾಲಿಯನ್ ನ ಸುರೇಶ ಲಕ್ಕನ್ನವರ ಮಾತನಾಡಿ, ಮಹಿಳಾ ಘಟಕದಿಂದ ಪೊಲೀಸ್ ರೊಂದಿಗೆ ರಕ್ಷಾಬಂಧನ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಅದರ ಜೊತೆಗೆ ಮಹಾಒಕ್ಕೂಟದಿಂದ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ನಿಮಗೆ ನಮ್ಮ ಸಹಾಯ- ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ಪ್ರಿಯಾ ಪುರಾಣಿಕ, ಮಹಿಳಾ ಘಟಕದ ಅಧ್ಯಕ್ಷ ಸುನಿತಾ ಪಟ್ಟಣಶೆಟ್ಟಿ ಉಪಾಧ್ಯಕ್ಷ ವೈಶಾಲಿ ಸುಧಾಗಡೆ ಕಾರ್ಯದರ್ಶಿಗಳಾದ ಪ್ರತಿಭಾ ಬಂಡಿ, ಸಹ ಕಾರ್ಯದರ್ಶಿಗಳಾದ ದೀಪಾ ಜಾಮಗೌಡ, ಸಹ ಖಜಾಂಚಿ ಉಷಾ ದೇಸಾಯಿ, ರೇಷ್ಮಾ ಹುಂದ್ರೆ ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 