ಲೋಕದರ್ಶನ ವರದಿ
ರಾಹುಲ ಜಾರಕಿಹೋಳಿಗೆ ಶ್ರೀಗಳಿಂದ ಸನ್ಮಾನ
ಯಮಕನಮರಡಿ, 19 : ಸಮೀಪದ ಹತ್ತರಗಿ ಹರಿಮಂದಿರಲ್ಲಿ ರವಿವಾರ ದಿ:18/05/2025 ರಂದು ರಾಜ್ಯ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ.ರಾಹುಲ ಸತೀಶ ಜಾರಕಿಹೊಳೊಳಿ ಇವರಿಗೆ ಹರಿ ಮಂದಿರದ ಪಿಠಾಧಿಕಾರಿಗಳಾದ ಡಾ. ಆನಂದ ಮಹಾರಾಜ ಗೋಸಾವಿ ಇವರು ಸತ್ಕರಿಸಿದರು.
ಡಾ.ಆನಂದ ಮಹಾರಾಜ ಗೋಸಾವಿ ಇವರ ಮಮ್ಮಗಳಾದ ಕೀರ್ತನಾ ಉರ್ ಮೆಹರ (ಅನಂದ ಮತ್ತು ಲಕ್ಷ್ಮೀ ಇವರ ಮೊಮ್ಮಗಳು ) ಇವರ ನಾಮಕರಣ ಸಮಾರಂಭ ಜರುಗಿತು. ಹತ್ತರಗಿ ಕಾರಿಮಠದ ಗುರುಸಿದ್ದ ಮಹಾಸ್ವಾಮಿಗಳು ಯಮಕನಮರಡಿ ಹುಣಸಿಕೊಳ್ಳಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ರಾಜ್ಯ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಯುವ ದುರೀಣ ರವಿ ಜಿಂಡ್ರಾಳಿ ಸಿಪಿಐ ಜಾವೇದ ಮುಶಾಪುರಿ, ವೀರಣ್ಣ ಬಿಸಿರೊಟ್ಟಿ ಪತ್ರಕರ್ತ ಸುನೀಲ ದೇಸಾಯಿ ಗೋಪಾಲ ಚಿಪಣಿ ಎಸ್.ಆರ್ ತಬರಿ ದೀಪಕ ನಾಡಗೌಡ ಸೇರಿದಂತೆ ಕರ್ನಾಟಕ ಮಹಾರಾಷ್ಟ್ರ ಭಾಗದ ಸಮಸ್ತ ಜನರು ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ಕೀರ್ತನಾ ಉರ್ ಮೆಹರ ಇವಳಿಗೆ ಆಶಿರ್ವದಿಸಿದರು.