ಸಂಸ್ಕೃತಿಯ ಕೆಲಸಗಳ ಅನುದಾನ ಕಡಿತಕ್ಕೆ ಪಂಡಿತಾರಾಧ್ಯ ಶ್ರೀಗಳ ಆಕ್ಷೇಪ

ಲೋಕದರ್ಶನವರದಿ

ಹಾವೇರಿ: ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬಿಡುಗಡೆ ಮಾಡಿರುವ ಅನುದಾನದ ಪಟ್ಟಿ ನೋಡಿ ಆಶ್ಚರ್ಯ ಮತ್ತು ಆಘಾತವಾಯ್ತು. ಅವರು ಯಾವ ಮಾನದಂಡ ಇಟ್ಟುಕೊಂಡು ಅನುದಾನ ಬಿಡುಗಡೆ ಮಾಡಿದ್ದಾರೆನ್ನುವುದು ಯಕ್ಷಪ್ರಶ್ನೆಯಾಗಿದೆ. ವರ್ಷದುದ್ದಕ್ಕೂ ನಿರಂತರವಾಗಿ ರಂಗಕಾಯಕವನ್ನು ತಪಸ್ಸೆನ್ನುವಂತೆ ಮಾಡಿಕೊಂಡು ಬಂದಿರುವ `ಶಿವಕುಮಾರ ಕಲಾಸಂಘ'ಕ್ಕೆ ಬಿಡುಗಡೆ ಮಾಡಿರುವುದು ಹತ್ತು ಲಕ್ಷ ಮಾತ್ರ. ರಂಗಸೇವೆಗಾಗಿ ಕಲಾಸಂಘ ಪ್ರತಿವರ್ಷ ಒಂದು ಕೋಟಿಗಿಂತ ಹೆಚ್ಚು ಹಣ ವಿನಿಯೋಗಿಸುತ್ತಿದೆ. ಇದುವರೆಗೆ ಕನಿಷ್ಟ 60 ಲಕ್ಷವಾದರೂ ಬರುತ್ತಿತ್ತು. ಅದರಿಂದ ಸ್ವಲ್ಪ ಉಸಿರಾಡಲು ಅವಕಾಶವಿತ್ತು. ಈಗ ಕುತ್ತಿಗೆಯನ್ನೇ ಹಿಸುಕಿ ಉಸಿರಾಟವನ್ನೇ ನಿಲ್ಲಿಸುವ ಕಾರ್ಯ ನಡೆದಂತಿದೆ.

   ಪ್ರತಿವರ್ಷ ನವೆಂಬರ್ನಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ನಾವು ಖಚರ್ು ಮಾಡುತ್ತಿರುವುದು ಸುಮಾರು 30 ಲಕ್ಷ. ಶಿವಸಂಚಾರ 3 ನಾಟಕಗಳನ್ನು ತೆಗೆದುಕೊಂಡು ವರ್ಷದುದ್ದಕ್ಕೂ ನಾಡಿನೆಲ್ಲೆಡೆ ಸುತ್ತಿ 150 ಪ್ರದರ್ಶನಗಳನ್ನಾದರೂ ನೀಡುವುದು. ಇದಕ್ಕಾಗಿ 35 ಲಕ್ಷಕ್ಕಿಂತಲೂ ಹೆಚ್ಚು ಹಣ ವಿನಿಯೋಗವಾಗುವುದು. ಒಂದು ವರ್ಷದ ರಂಗ ಡಿಪ್ಲೊಮೊ ತರಬೇತಿಗಾಗಿ ಸುಮಾರು 40 ಲಕ್ಷ ಖಚರ್ಾಗುವುದು. ತಿಂಗಳ ನಾಟಕೋತ್ಸವ, ಮಕ್ಕಳ ಬೇಸಿಗೆ ರಂಗತರಬೇತಿ, ಶಿಕ್ಷಕರ ರಂಗತರಬೇತಿ ಇತ್ಯಾದಿಗಾಗಿ ಸಾಕಷ್ಟು ಹಣದ ಬಳಕೆಯಾಗುವುದು. ನಮ್ಮ ಕಾರ್ಯಚಟುವಟಿಕೆಗಳಿಗೆ ಸಾಕ್ಷಿಯಾಗಿ ಬೇಕಾದ ಮಾಹಿತಿಗಳನ್ನೆಲ್ಲ ಇಲಾಖೆಗೆ ಆನ್ ಲೈನ್ ಮೂಲಕ ಅವಧಿಯೊಳಗೆ ಕಳಿಸಿಕೊಡುತ್ತ ಬರಲಾಗಿದೆ. ಹೀಗಿದ್ದೂ ಅದಾವುದನ್ನೂ ಗಮನಿಸದೆ ಕೇವಲ ಹತ್ತು ಲಕ್ಷ ಮಂಜೂರು ಮಾಡಿರುವುದು ಯಾವ ಆಧಾರದ ಮೇಲೆ?

ಎಲ್ಲ ಅಕಾಡೆಮಿಗಳ ಅಧ್ಯಕ್ಷರನ್ನೊಳಗೊಂಡ ಸಲಹಾ ಸಮಿತಿಯ ಅಭಿಪ್ರಾಯಗಳಿಗೂ ಮನ್ನಣೆ ನೀಡಿಲ್ಲವೆಂದ ಮೇಲೆ ಅಂಥ ಸಮಿತಿಯನ್ನು ಮಾಡುವ ಅಗತ್ಯವಾದರೂ ಏನಿತ್ತು? ವಾಸ್ತವವಾಗಿ ಸಲಹಾ ಸಮಿತಿಯ ಅಭಿಪ್ರಾಯವೇ ಅಂತಿಮಗೊಳ್ಳಬೇಕಾಗಿತ್ತು. ಬದಲಾವಣೆ ಮಾಡಬೇಕಾದರೂ ಅವರ ಸಲಹೆ ಕೇಳಬೇಕಾಗಿತ್ತು. ಇದನ್ನು ಮಾಡದಿರುವುದು ಅಧಿಕಾರಷಾಹಿಯ ದ್ಯೋತಕವಲ್ಲದೆ, ಸಂಸ್ಕೃತಿಯನ್ನು ಕಟ್ಟುವ ಕಾರ್ಯವಲ್ಲ. 

        ನಮ್ಮ ಸಂಸ್ಥೆ ಮಾಡುವ ಕಾರ್ಯವನ್ನು ಇಲಾಖೆಯವರೇ ಅಥವಾ ಸಕರ್ಾರದವರೇ ಮಾಡಿದರೆ ಕನಿಷ್ಟ ಹತ್ತಾರು ಕೋಟಿ ಖಚರ್ು ತೋರಿಸುವುದರಲ್ಲಿ ಅನುಮಾನವಿಲ್ಲ. ಪ್ರಾಮಾಣಿಕವಾಗಿ ರಂಗಸೇವೆ ಬೇಡ ಎನ್ನುವ ಇರಾದೆ ಸಕರ್ಾರಕ್ಕೆ, ಅಧಿಕಾರಿಗಳಿಗೆ ಇದ್ದರೆ ಅದನ್ನಾದರೂ ನೇರವಾಗಿ ಹೇಳಲಿ. 

     ನಮ್ಮಂಥ ಸಂಸ್ಥೆಯ ಗತಿಯೇ ಹೀಗಾದಾಗ ಸಣ್ಣ ಪುಟ್ಟ ಸಂಸ್ಥೆಗಳಿಗೆ ಇನ್ನೆಷ್ಟು ನ್ಯಾಯ ದೊರಕಿರಬಹುದು? ರಾಜಕಾರಣಿಗಳು, ಅಧಿಕಾರಿಗಳು ಅನಾವಶ್ಯಕವಾಗಿ ಮಾಡುವ ಖಚರ್ುಗಳಿಗೆ ಮಿತಿಯೇ ಇಲ್ಲ. ಆದರೆ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳಿಗೆ ಮಾತ್ರ ಅವರಲ್ಲಿ ಹಣವಿಲ್ಲ. ಕಾರಣ ಜನರು ಜಾಗೃತರಾದರೆ ತಮ್ಮ ಬೇಳೆ ಬೇಯದು ಎನ್ನುವ ಭಾವನೆ ಅವರಿಗಿರಬೇಕು. ನಿಜಕ್ಕೂ ಅಧಿಕಾರಿಗಳಿಗೆ, ಮಂತ್ರಿಗಳಿಗೆ ನಿಜವಾದ ಸಾಂಸ್ಕೃತಿಕ ಒಲವು ಇದ್ದಲ್ಲಿ ತಕ್ಷಣ ಈ ಆದೇಶವನ್ನು ತಡೆ ಹಿಡಿದು, ಮರುಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.