ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ: ಶಾಸಕ ವಿಶ್ವಾಸ ವೈದ್ಯ

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ: ಶಾಸಕ ವಿಶ್ವಾಸ ವೈದ್ಯ Prioritize children's education: MLA Vishwas Vaidya

ಯರಗಟ್ಟಿ, 10 : ಸಮೀಪದ ಗೊರಗುದ್ದಿ ಗ್ರಾಮದರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿದ ಶಾಸಕ ವಿಶ್ವಾಸ ವೈದ್ಯ ಮಾತನಾಡಿ ನಂಬಿಕೆಗೆ ಹೆಸರು ವಾಸಿಯಾದ ಗ್ರಾಮ.ಈ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವ ನಮ್ಮ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳು ವಿವಿಧ ರಾಜ್ಯಗಳಲ್ಲಿ ಸಹ ಮಾದರಿಯಾಗಿದೆ. 

ಈ ಗ್ರಾಮಕ್ಕೆ ಬೇಕಾದ ನನ್ನ ಸೇವೆ ಸದಾಕಾಲ ಇದ್ದೆ ಇರುತ್ತೆ ಗ್ರಾಮದ ಎಲ್ಲಾ ಮಕ್ಕಳ ಶಿಕ್ಷಣಕ್ಕೆ ಮಹತ್ವ ಕೊಡಿ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಫಕೀರ​‍್ಪ ಹದ್ದನ್ನವರ, ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ ಪ್ರಕಾಶ ವಾಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬಸವರಾಜ ಹಂಪನ್ನವರ, ಛಾಯಪ್ಪ ಹುಂಡೇಕಾರ, ಕಡಬಿ ಗ್ರಾ. ಪ. ಅಧ್ಯಕ್ಷ ಪ್ರಕಾಶ ಸುಣದೋಳಿ, ಉಪಾಧ್ಯಕ್ಷರಾದ ಮಹಾದೇವಿ ಗುಗ್ಗರನಟ್ಟಿ, ಸದಸ್ಯರಾದ ಗಂಗಪ್ಪ ಮೀಸಿ, ಷಣ್ಮುಖ ಕರಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


Revanasiddheshwara Jatra Mahotsava Basic Facilities and Services Model Programs in Other States