ಪ್ರತಿಭಾ ಪುರಸ್ಕಾರದೊಂದಿಗೆ ಸಮಾಜಮುಖಿ ಕೆಲಸ : ಪ್ರಶಾಂತ್ ಕಲ್ಲೂರು ಅಭಿಮತ
Prashanth Kallur's opinion on social work with Pratibha Award
ಲೋಕದರ್ಶನ ವರದಿ
ಕಂಪ್ಲಿ: ಸಾಮಾಜಿಕ ಕಳಕಳಿಯೊಂದಿಗೆ ಯುವ ನಾಯಕ ಹೊಸಕೋಟೆ ಜಗದೀಶ ಅವರು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಹೇಳಿದರು. ಸ್ಥಳೀಯ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ವೀರಶೈವ ಭವನದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಜನ್ಮದಿನದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೀರಶೈವ ಲಿಂಗಾಯತ ಮಠಗಳು, ಸಂಸ್ಥೆಗಳು ಜಾತಿ, ಬೇಧಭಾವ ಇಲ್ಲದೇ, ಪ್ರತಿಯೊಬ್ಬರಿಗೂ ಶಿಕ್ಷಣದ ಜೊತೆಗೆ ಅನ್ನದಾಸೋಹವನ್ನು ಕಲ್ಪಿಸುತ್ತಾ ಬಂದಿವೆ.
ಹೊಸಕೋಟೆ ಜಗದೀಶ ಅವರು ಸದಾ ಸಮಾಜದ ಏಳಿಗೆಗೆ ಶ್ರಮಿಸುವ ಜೊತೆಗೆ ಸಾಮಾಜಿಕ ಕಳಕಳಿಯನ್ನು ನಿರಂತರವಾಗಿ ಹೊಂದಲಿ ಎಂದರು. ಎಮ್ಮಿಗನೂರು ಹಂಪಿ ಸಾವಿರ ದೇವರ ಮಹಾಂತ ಮಠದ ಪರಮಪೂಜ್ಯ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಸಂವಿಧಾನವನ್ನು ಕಟ್ಟಿಕೊಟ್ಟಂತಹ ಸಮಾಜ ವೀರಶೈವ ಸಮಾಜವಾಗಿದೆ. ಸಮಾಜದ ಸಂಸ್ಕೃತಿ ದೊಡ್ಡದಿದೆ. ವೀರಶೈವ ಸಮಾಜದ ಮಠ, ಮಂದಿರ, ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕದಿದ್ದರೆ, ಬಹುಕೋಟಿ ಜನರು ಅನಕ್ಷರಸ್ಥರಾಗುತ್ತಿದ್ದರು.
ಈ ಶಿಕ್ಷಣದಿಂದಾಗಿ ಸಾಕಷ್ಟು ಮಕ್ಕಳಿಗೆ ಒಳ್ಳೆಯ ಭವಿಷ್ಯದ ಕಡೆಗೆ ವಾಲುವಂತಾಗಿದೆ. ಸಮಾನತೆ ತಂದಂತಹ ಸಮಾಜವಾಗಿದೆ. ಸಮಾಜದ ದೃಷ್ಟಿಕೋನವಾಗಿದೆ. ಸಂಸ್ಕೃತಿ, ಸಂಸ್ಕಾರದಿಂದ ದೊಡ್ಡತನ ಬೆಳೆಯುತ್ತದೆ. ಅಹಿಂಸೆ, ಸತ್ಯ, ದಾನವನ್ನು ಬೆಳೆಸಿಕೊಳ್ಳಬೇಕು. ವಿದ್ಯಾ ಮತ್ತು ಸಮಾಜಕ್ಕಾಗಿ ಹೊಸಕೋಟೆ ಜಗದೀಶ ಶ್ರಮಿಸುತ್ತಿದ್ದಾರೆ ಎಂದರು. ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾ, ಶಿಕ್ಷಣದಲ್ಲಿ ಮಕ್ಕಳ ಭವಿಷ್ಯ ಅಡಗಿದೆ. ಆ ದೃಷ್ಠಿಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ. ಸಮಾಜ ಸಹಕಾರದಿಂದಾಗಿ ಇಂತಹ ದೊಡ್ಡ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು ಎಂದರು.
ಕಲ್ಯಾಣಚೌಕಿ ಮಠದ ಬಸವರಾಜ ಶಾಸ್ತ್ರ, ದಿವಾನ್ ಖಾನಾ ಹಜರತ್ ಸೈಯದ್ ಶಾ ಅಬುಲ್ ಹಸನ್ ಖಾದ್ರಿ, ಪಾಸ್ಟರ್ ಪಾಲ್ ಪಂಪಾಪತಿ ಇವರು ದಿವ್ಯ ಸಾನಿಧ್ಯವಹಿಸಿದ್ದರು. ನಂತರ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ಅ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೌರ ಕಾರ್ಮಿಕರು, ರೈತ ದಂಪತಿ ಶಿವಲಿಂಗನಗೌಡ ದಂಪತಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಪೇಕ್ಸ್ ಬ್ಯಾಂಕ್ ಸದಸ್ಯ ಪಿ.ಮೂಕಯ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಚಾನಾಳ್ ಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ನಾಗರಾಜ, ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಬಿ.ವಿ.ಗೌಡ, ಎಸ್.ಚಂದ್ರಶೇಖರಗೌಡ, ತಾಲೂಕಾಧ್ಯಕ್ಷ ಬಳೆ ಮಲ್ಲಿಕಾರ್ಜುನ, ಉಪಾಧ್ಯಕ್ಷ ಕರಿಬಸಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿ ಮನೋಜ್ಗೌಡ, ಮುಖಂಡರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿ ಕೊಟ್ರ್ಪ, ಮೆಟ್ರಿ ಹೊನ್ನಳ್ಳಿ ಶಿವಪುತ್ರ್ಪ, ವಿ.ವಿದ್ಯಾಧರ, ಜಿ.ಲಿಂಗನಗೌಡ, ಹೊನ್ನಳ್ಳಿ ಗಂಗಾಧರಗೌಡ, ಬೇರಿ್ಗ ಮಹೇಶಗೌಡ, ಅಳ್ಳಳ್ಳಿ ವಿರೇಶ, ಬಿ.ನಾರಾಯಣಪ್ಪ, ಶಾಂತಿಲಾಲ್, ಆನಂದರೆಡ್ಡಿ, ಅಮರೇಶಗೌಡ, ವಿರುಪಾಕ್ಷಯ್ಯಸ್ವಾಮಿ, ಶಂಭುಲಿಂಗ, ಹಂಪಾರೆಡ್ಡಿ, ಕೋರಿಬಸವರಾಜ, ಅಕ್ಕಮಹಾದೇವಿ, ಶಿಲ್ಪನಾಗರಾಜ ಸೇರಿದಂತೆ ವೀರಶೈವ ಸಮಾಜದವರು ಹಾಗೂ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು 