ಪ್ರಜಾ ಜಾಗೃತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ

ಪ್ರಜಾ ಜಾಗೃತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ Praja Jagruti Vedike office bearers went to the District Collector's office and through him submitte

ಲೋಕದರ್ಶನ ವರದಿ . 

ವಿಜಯನಗರ 21:  ಜಿಲ್ಲಾ ಪ್ರಜಾ ಜಾಗೃತಿ ವೇದಿಕೆ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರೀಲ್‌-ಮೇ ತಿಂಗಳಲ್ಲಿ ರಾಜ್ಯಾಧ್ಯಂತ ನಗರ ಪ್ರದೇಶದ ಅನಧಿಕೃತ ಬಡಾವಣೆ ನಿವಾಸಿಗಳಿಗೆ ಬಿ-ಖಾತೆ ನೀಡಿರುವುದು, ಸ್ವಾಗತಾರ್ಹವಾಗಿದೆ. ಇದರಿಂದ ಜಿಲ್ಲಾಧಿಕಾರಿಗಳಿಂದ ಭೂ-ಪರಿವರ್ತನೆಯಾಗದ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದೆ, ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವೇಶನ ಹೊಂದಿರುವ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ.

ಆದರೆ ಸರ್ಕಾರದ ಈ ಕ್ರಮ ಬಿ-ಖಾತಾದಾರರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಬಿ-ಖಾತಾ ದಾಖಲೆ ಅಷ್ಠೇನು ಸುರಕ್ಷಿತ ಹಾಗೂ ಕಾನೂನು ಬದ್ಧವಾಗಿಲ್ಲ ಎಂಬ ಅಭಿಪ್ರಾಯವಿದೆ. ಅಲ್ಲದೇ ಬಿ-ಖಾತಾ ಆಸ್ತಿಯ ಮಾಲೀಕರು ತಮ್ಮ ಮಕ್ಕಳ ಮದುವೆ, ಶಿಕ್ಷಣ, ತುರ್ತು ವೈಧ್ಯಕೀಯ ಚಿಕಿತ್ಸೆ ಪಡೆಯಲು, ಹಾಗೂ ಸರ್ಕಾರದಿಂದ ಸೌಲಭ್ಯ ಪಡೆಯಲು ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರ ಈ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿ 6 ತಿಂಗಳ ಹಿಂದೆಯೇ ಬಿ-ಖಾತಾ ಮಾಲೀಕರಿಗೆ ಎ-ಖಾತಾ ದಾಖಲೆ ನೀಡಲು ತೀರ್ಮಾನಿಸಿದ್ದರೂ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಬಿ-ಖಾತಾ ಮಾಲೀಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಆದುದರಿಂದ ರಾಜ್ಯ ಸರ್ಕಾರವು ಕೂಡಲೇ ಬಿ-ಖಾತಾ ಆಸ್ತಿ ಮಾಲೀಕರಿಗೆ ಹೆಚ್ಚು ಸುರಕ್ಷಿತ ಹಾಗೂ ಅಧಿಕೃತ ಹಾಗೂ ಕಾನೂನು ಬದ್ದ ಎ-ಖಾತಾ ನೀಡಲು ಆಗ್ರಹ ಪಡಿಸುತ್ತೇವೆ.  

ನಂತರ ವೇದಿಕೆಯ ಅಧ್ಯಕ್ಷರಾದ ಯು.ಆಂಜನೇಯಲು ಮಾತನಾಡಿ ಆಸ್ತಿ ನಿವೇಶನಗಳ ಮಾರಾಟ ಮತ್ತು ಕ್ರಯ ವ್ಯವಹಾರ ನಡೆಸುವಾಗ ಫಾರಂ-3 ಅತ್ಯಂತ ಅವಶ್ಯವಾಗಿದೆ. ಆದರೆ ಫಾರಂ-3 ನವೀಕರಣ ದಾಖಲೆ ನೀಡಿಕೆಗೆ ಹೊಸಪೇಟೆ ನಗರ ಸಭೆಯಲ್ಲಿ ಅನವಶ್ಯಕವಾಗಿ ಈ ಹಿಂದೆ ನೀಡಿದ ಕಡ್ಡಾಯ ಪಡಿಸಿರುವುದು ಸರಿಯಲ್ಲ. ಏಕೆಂದರೆ ಮೊದಲನೇ ಸಲ ಹೊಸದಾಗಿ ಫಾರಂ-3 ಪಡೆಯಲು ಅರ್ಜಿ ಸಲ್ಲಿಸುವಾಗ ಜಿಲ್ಲಾಧಿಕಾರಿಗಳ ಭೂ-ಪರಿವರ್ತನ ಆದೇಶ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಂತಿಮ ಅನುಮೋದನೆ, ವಸತಿ ನಿವೇಶನಗಳ ನೀಲಿ ನಕ್ಷೆ, ಪ್ರಮಾಣ ಪತ್ರ, ಸಬ್‌ರಿಜಿಸ್ಟರ್ ಕಛೇರಿಯ ಇ.ಸಿ. ತೆರಿಗೆ ಪಾವತಿ ರಶೀದಿ, ಕ್ರಯ ಪತ್ರ, ಪಾಲುವಿಭಾಗ ಪತ್ರ, ಈ ಎಲ್ಲಾ ದಾಖಲೆಗಳನ್ನು ಮೊದಲೇ ನಗರಸಭೆಗೆ ಸಲ್ಲಿಸಲಾಗಿರುತ್ತದೆ. ಆದುದರಿಂದ ಎರಡನೇ ಸಲ ಫಾರಂ-3 ನವೀಕರಣಕ್ಕೆ ಮತ್ತೊಮ್ಮೆ ಹಿಂದಿನ ದಾಖಲೆಗಳನ್ನು ಕೇಳುವುದು ಸೂಕ್ತವಲ್ಲ. ಆದುದರಿಂದ ತೀರಾ ಅಗತ್ಯವಾಗಿರುವ ಚಾಲ್ತಿ ವರ್ಷದ ತೆರಿಗೆ ಪಾವತಿ ರಶೀದಿ ಮತ್ತು ಹಿಂದೆ ವಿತರಿಸಿದ ಹಳೇಯ ಫಾರಂ-3 ಪ್ರತಿ ಪಡೆದು ನವೀಕರಣ ದಾಖಲೆ ವಿತರಿಸಲು ಆಗ್ರಹಿಸಿದರು.