ಅಥಣಿ ಸುಧಾ ಭಜನಾ ಮಂಡಳದಿಂದ ಏಕಾದಶಿ ನಿಮಿತ್ಯ ಪಲ್ಲಕ್ಕಿ ಉತ್ಸವ
Pallakki Utsava organized by Athani Sudha Bhajana Mandali on the occasion of Ekadashi
ಅಥಣಿ 25 : ಆಶಾಢ ಏಕಾದಶಿ ನಿಮಿತ್ಯ ಸುಧಾ ಮಹಿಳಾ ಭಜನಾ ಮಂಡಳದ ಭಗಿನಿಯರು ಕೋಲಾಟ, ನೃತ್ಯದೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ವಿಠ್ಠಲ ಮಂದಿರಕ್ಕೆ ಆಗಮಿಸಿದರು. ಸುಧಾ ಭಜನಾ ಮಂಡಳದ ಭಗಿನಿಯರು ಸ್ಥಳೀಯ ನರಸಿಂಹ ದೇವಸ್ಥಾನದಲ್ಲಿ ಪಲ್ಲಕ್ಕಿಗೆ, ನರಸಿಂಹ ದೇವರಿಗೆ ಆರತಿ ಮಾಡಿದ ನಂತರ ಮೆರವಣಿಗೆ ಮೂಲಕ ಹೊರಟು ಬಾರೆ ಭಾಗ್ಯದ ನಿಧಿಯೇ, ಇಟ್ಟಿಗೆ ಮೇಲೆ ನಿಂತಾನಮ್ಮ , ಗುರು ಮಧ್ವರಾಯರಿಗೆ, ರಂಗಾ ನಿನ್ನ ಕೊಂಡಾಡುವೆ, ಪತಿಯು ನಮಗೆ ಸಂಪದವೀಯಲಿ ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುತ್ತ, ಕುಣಿಯುತ್ತ, ವಿಠ್ಠಲನ ನಾಮಸ್ಮರಣೆ ಮಾಡುತ್ತ ಕೋಲಾಟ ಆಡಿದರು, ತುಳಸಿ ಕಟ್ಟೆ ತಲೆ ಮೇಲೆ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಮೆರವಣಿಗೆ ಜೋಶಿ ಗಲ್ಲಿ, ಹಬ್ಬು ಗಲ್ಲಿ, ದೇಶಪಾಂಡೆ ಗಲ್ಲಿಯ ಮೂಲಕ ವಿಠ್ಠಲ ಮಂದಿರ ತಲುಪಿ ಸಮಾವೇಶ ಗೊಂಡಿತು. ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ಆರತಿ ಮಾಡಿ ಬರಮಾಡಿಕೊಂಡರು. ಹರಿವಾಣ ಸೇವೆಯನ್ನು ದೇವರಿಗೆ ಅರ್ಿಸಲಾಯಿತು, ವಿಠ್ಠಲ ದೇವರಿಗೆ ಆರತಿ ಮಾಡಲಾಯಿತು. ಏಕಾದಶಿ ವೃತದ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶಿಷ್ಠವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸುಧಾ ಭಜನಾ ಮಂಡಳದ ರಮಾ ಕುಲಕರ್ಣಿ ಹೇಳಿದರು. ಮೆರವಣಿಗೆಯಲ್ಲಿ ಸುಧಾ ಭಜನಾ ಮಂಡಳಿಯ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 