ಒನಕೆ ಓಬವ್ವನ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ: ಡಾ. ಶಿರೂರ
Onake Obavva's adventure continues to inspire even today: Dr. Shiroora
ಲೋಕದರ್ಶನ ವರದಿ
ಜಮಖಂಡಿ 14: ಒನಕೆ ಓಬವ್ವ ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದಾರೆ. ಚಿತ್ರದುರ್ಗದ ಕೋಟೆಯ ಬಾಗಿಲಲ್ಲಿ ಒಬ್ಬ ಶತ್ರುವನ್ನೂ ಒಳಗೆ ನುಗ್ಗದಂತೆ ತಡೆಯಲು ಒಬ್ಬಳೇ ಹೋರಾಡಿದ ಅವರ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಎಸ್, ಶಿರೂರ ಹೇಳಿದರು.
ನಗರದ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯ್ನಾಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇತ್ಯಾಗ ಮಾಡಿದ ಓಬವ್ವ ಅವರ ಧೈರ್ಯವು ಮಹಿಳೆಯರ ಶೌರ್ಯ, ತ್ಯಾಗ ಮತ್ತು ಸಂಕಲ್ಪದ ಮಹತ್ತ್ವವನ್ನು ನಮಗೆ ನೆನಪಿಸುತ್ತದೆ. ಅವರ ಜೀವನವು ಪ್ರತಿಯೊಬ್ಬಯುವತಿಯಿಗೂ ಪ್ರೇರಣೆ ಯದಾರಿ ತೋರಿಸುತ್ತದೆ. ಸತ್ಯ, ಧೈರ್ಯಮತ್ತು ದೇಶಪ್ರೇಮದ ಅಡಿಗಲ್ಲುಗಳ ಮೇಲೆ ನಿಂತು ಬದುಕುವ ಪಾಠವನ್ನು ಕಲಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅನುಸೂಯಾ ಮಬ್ರುಮಕರ, ಸುಜಾತಾ ಬಸಪ್ಪಗೋಳ, ಎಸ್. ಬಿ. ತೇರದಾಳ, ಸಂಜೀವ ಕಾಂಬಳೆ, ವಿನಾಯಕ ಹಿಮಕರ, ಸುನಂದಾ ಸಣ್ಣಕ್ಕಿ, ಗಂಗಪ್ಪ ನಾಯಕ, ಸಂತೋಷ ಯಡಹಳ್ಳಿ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 