ಒನಕೆ ಓಬವ್ವನ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ: ಡಾ. ಶಿರೂರ
Onake Obavva's adventure continues to inspire even today: Dr. Shiroora
ಲೋಕದರ್ಶನ ವರದಿ
ಜಮಖಂಡಿ 14: ಒನಕೆ ಓಬವ್ವ ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿದ್ದಾರೆ. ಚಿತ್ರದುರ್ಗದ ಕೋಟೆಯ ಬಾಗಿಲಲ್ಲಿ ಒಬ್ಬ ಶತ್ರುವನ್ನೂ ಒಳಗೆ ನುಗ್ಗದಂತೆ ತಡೆಯಲು ಒಬ್ಬಳೇ ಹೋರಾಡಿದ ಅವರ ಸಾಹಸ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸುನಂದಾ ಎಸ್, ಶಿರೂರ ಹೇಳಿದರು.
ನಗರದ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಘಟಕದ ಅಡಿಯಲ್ಲಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯ್ನಾಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇತ್ಯಾಗ ಮಾಡಿದ ಓಬವ್ವ ಅವರ ಧೈರ್ಯವು ಮಹಿಳೆಯರ ಶೌರ್ಯ, ತ್ಯಾಗ ಮತ್ತು ಸಂಕಲ್ಪದ ಮಹತ್ತ್ವವನ್ನು ನಮಗೆ ನೆನಪಿಸುತ್ತದೆ. ಅವರ ಜೀವನವು ಪ್ರತಿಯೊಬ್ಬಯುವತಿಯಿಗೂ ಪ್ರೇರಣೆ ಯದಾರಿ ತೋರಿಸುತ್ತದೆ. ಸತ್ಯ, ಧೈರ್ಯಮತ್ತು ದೇಶಪ್ರೇಮದ ಅಡಿಗಲ್ಲುಗಳ ಮೇಲೆ ನಿಂತು ಬದುಕುವ ಪಾಠವನ್ನು ಕಲಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅನುಸೂಯಾ ಮಬ್ರುಮಕರ, ಸುಜಾತಾ ಬಸಪ್ಪಗೋಳ, ಎಸ್. ಬಿ. ತೇರದಾಳ, ಸಂಜೀವ ಕಾಂಬಳೆ, ವಿನಾಯಕ ಹಿಮಕರ, ಸುನಂದಾ ಸಣ್ಣಕ್ಕಿ, ಗಂಗಪ್ಪ ನಾಯಕ, ಸಂತೋಷ ಯಡಹಳ್ಳಿ ಸೇರಿದಂತೆ ಅನೇಕರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 