ಓಂ ನಮಃ ಶಿವಾಯ ತಾರಕ ಮಂತ್ರದ ಮಂಗಲೋತ್ಸವ
Om Namah Shivaya Taraka Mantra's Mangalotsava
ಲೋಕದರ್ಶನ ವರದಿ
ಹಾರೂಗೇರಿ, 17 : ಇಲ್ಲಿನ ಶ್ರೀ ಗುರು ಚನ್ನವೃಷಭೇಂದ್ರ ದೇವರಕೊಂಡಜ್ಜನವರ ಲೀಲಾಮಠದಲ್ಲಿ ಮಹಾಶಿವರಾತ್ರಿ ಸಪ್ತಾಹದ ಓಂ ನಮಃ ಶಿವಾಯ ತಾರಕ ಮಂತ್ರದ ಶತಮಾನೋತ್ಸವ ನಿಮಿತ್ತ ನಿರಂತರ 7 ದಿನಗಳವರೆಗೆ ನಡೆದ ಭಜನಾ ಸಪ್ತಾಹ ಮಂಗಳವಾರ ಮಂಗಲೋತ್ಸವ, ಪೂಜಾ, ವಿಧಿ-ವಿಧಾನಗಳೊಂದಿಗೆ ಸಂಪನ್ನವಾಯಿತು.
ಸಹಸ್ರಾರು ಭಕ್ತರು ಶ್ರೀ ಚನ್ನವೃಷಭೇಂದ್ರ ದೇವರಕೊಂಡಜ್ಜ ಮತ್ತು ಶ್ರೀ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. 7 ದಿನಗಳವರೆಗೆ ನಿರಂತರ ಭಜನೆಗಾಗಿ 10ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರ ತಂಡಗಳನ್ನು ರಚಿಸಲಾಗಿತ್ತು.
ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಮಂಗಲ ಗೀತೆ ಹಾಡಿ, ಮಾತನಾಡುತ್ತ ಮನೆಗಳಲ್ಲಿ ಓಂ ನಮಃ ಶಿವಾಯ ತಾರಕ ಮಂತ್ರದ ಭಜನೆಯನ್ನು ನಿತ್ಯ ಮಾಡುವುದರಿಂದ ಇಂದ್ರಿಯದ ಮೇಲೆ ನಿಯಂತ್ರಣ ಬರುತ್ತದೆ. ಭಕ್ತಿ ಹೆಚ್ಚಾದಂತೆ ಆಯಾಸ ಕಡಿಮೆಯಾಗುತ್ತದೆ. ಏಕೆಂದರೆ ಆ ಭಕ್ತಿಯಲ್ಲಿ ದೇವರಕೊಂಡಜ್ಜನವರ ದಿವ್ಯ ಶಕ್ತ ಅಡಗಿದೆ ಎಂದರು.
ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ವಿಠ್ಠಲರಾವ ಬಂತಿ, ಸಿದ್ದಪ್ಪ ಗವಣ್ಣವರ, ನೇಮಿನಾಥ ಕೊತ್ತಲಗಿ, ಮಲಗೌಡ ಉಮರಾಣಿ, ಯಮನಪ್ಪ ಬಂಡಗಾರ, ವಿಜಯ ಬಂತಿ, ಪದ್ಮರಾಜ ಕರ್ಣವಾಡಿ, ತಮ್ಮಣ್ಣಿ ಕುರಿ, ಲಾಲಸಾಬ ಜಮಾದಾರ, ಎಸ್.ವಾಯ್.ಸನದಿ, ಮುತ್ತ-ಪ್ಪ ಗಸ್ತಿ, ಭಗವಂತ ಸೂರಣ್ಣವರ, ಚನ್ನಬಸು ಸದಲಗಿ, ಅಪ್ಪಾಸಾಬ ಹಿಡಕಲ್, ಕಾಶಪ್ಪ ನಾಗನೂರ, ರಾಘವೇಂದ್ರ ದೇಶಪಾಂಡೆ, ಸುರೇಶ ಧರ್ಮಟ್ಟಿ, ಮಹಾವೀರ ಅಸ್ಕಿ, ಜ್ಯೋತೆಪ್ಪ ಉಮರಾಣಿ, ಶಶಿಧರ ಶಿಂಗೆ, ಗೋಪಾಲ ಧರ್ಮಟ್ಟಿ, ಬಾಬು ಹಳ್ಳೂರ ಮೊದಲಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 