ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ಸಂವಾದ

ವಿದ್ಯಾರ್ಥಿಗಳೊಂದಿಗೆ ಅಧಿಕಾರಿಗಳ ಸಂವಾದ Officials' interaction with students

  ಯಮಕನಮರಡಿ 15: ಸ್ಥಳೀಯ ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿದಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕಾರ್ಯಕಲಾಪವನ್ನು ವಿಕ್ಷಿಸಿದರು.  ಈ ಕುರಿತು ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಈ ಸಂದರ್ಭದಲ್ಲಿ ಕಾರ್ಯಕ್ರಮ ಉಸ್ತುವಾರಿಗಳಾದ  ಡಿ.ಡಿ.ಪಿ.ಯು ಗಳಾದ ಪಿ. ಆರ್‌.ಭಂಡಾರಿ ಸರ್ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ  ಎಮ್ ಎಮ್ ಕಾಂಬಳೆ ಉಪದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಬೆಳಗಾವಿ, ಎಂ.ಎ.ಮುಲ್ಲಾ ಸರ್ ನಿರಂಜನ ಕುರುಬರ ಸರ್, ಮಹಾದೇವ ತಳವಾರ ಸರ್ ಕಾಂಬಳೆ ಸರ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಅಧಿಕಾರಿಗಳು ಹಾಗೂ ಉಪನ್ಯಾಸಕರಾದ ಬಿ.ಬಿ.ಕೊಡ್ಲಿ ಹಾಗೂ ಎಸ್‌.ಆರ್‌.ತಬರಿ ಸರ್ ಹಾಜರಿದ್ದು ವಿದ್ಯಾರ್ಥಿಗಳೊಂದಿಗೆ ಕಾರ್ಯಕಲಾಪದ ವೀಕ್ಷಣೆಯ ಕುರಿತು ಸಂವಾದ ನಡೆಸಿದರು.