ಘಟಪ್ರಭಾದಲ್ಲಿ ನೂಲ ಚಂದಯ್ಯ ಜಯಂತಿ ಆಚರಣೆ

ಘಟಪ್ರಭಾದಲ್ಲಿ ನೂಲ ಚಂದಯ್ಯ ಜಯಂತಿ ಆಚರಣೆ  Noola Chandayya Jayanti celebrated in Ghataprabha


ಘಟಪ್ರಭಾ 28: ಘಟಪ್ರಭಾ ಪಟ್ಟಣದಲ್ಲಿ ಭಜಂತ್ರಿ ಸಮಾಜದ ವತಿಯಿಂದ ನೂಲ ಚಂದಯ್ಯ ಜಯಂತಿ ಹಾಗೂ ಕರೆಮ್ಮಾ ದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹೊಸಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ನೂಲ ಚಂದಯ್ಯ ಅವರ ಇತಿಹಾಸವನ್ನು ವಿವರಿಸಿದರು. ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ. ಮಹಾಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಸಮಾಜಗಳ ಮುಖಂಡರು ಹಾಗೂ ಭಜಂತ್ರಿ ಸಮಾಜದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.