ಆಶಯ ಭಾಷಣಕ್ಕೆ ಅಜೀವ ಸದಸ್ಯರ ಆಕ್ಷೇಪ

ಆಶಯ ಭಾಷಣಕ್ಕೆ ಅಜೀವ ಸದಸ್ಯರ ಆಕ್ಷೇಪ Non-life members object to Ashya's speech

 

ದಾಂಡೇಲಿ 14:   ದಾಂಡೇಲಿಯಲ್ಲಿ ನಡೆಯುತ್ತಿರುವ 25 ನೇ  ಜಿಲ್ಲಾ   ಕನ್ನಡ  ಸಾಹಿತ್ಯ ಸಮ್ಮೇಳನ ಆಶಯ ಭಾಷಣ ಮಾಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬೊಮ್ಮಯ್ಯ. ಎನ್‌.  ವಾಸರೆಯ ದರ​‍್ದ ಮಾತುಗಳಿಗೆ ಕೆಲ  ಅಜೀವ ಸದಸ್ಯರು ಸಾಮಾಜಿಕ ಜಾಲ ತಾಣಗಳಲ್ಲಿ  ಆಕ್ಷೇಪ  ವ್ಯಕ್ತಪಡಿಸಿದ್ದಾರೆ. ಉ.ಕ. ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ  ಸರ್ಕಾರದ ಇಲಾಖೆಗಳ, ಕೇಂದ್ರ ಕ.ಸಾ.ಪ. ಅನುಮತಿ ಇಲ್ಲದೆ ಸಮ್ಮೇಳನ ಮಾಡ ಹೊರಟಿದಲ್ಲದೆ , ಕೋರ್ಟನಿಂದ ಷರತ್ತು ಬದ್ಧ ಸೂಚನೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ಕೊಡಿಸಿದ್ದರು. ಉದ್ಘಾಟನೆ ವೇಳೆ ಪ್ರಸ್ತಾವಿಕ ಮತ್ತು ಆಶಯ ಭಾಷಣ ಮಾಡುವಾಗ  ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ  ಕುರಿತು , ಸಮ್ಮೇಳನಕ್ಕೆ  ತಡೆ ಕೋರಿ ದೂರು ದಾಖಲಿಸಿದವರನ್ನು  ಕಟುವಾಗಿ ಟೀಕಿಸುತ್ತಾ, *ವಯಕ್ತಿಕವಾಗಿ ಬಂದರೆ  ತೊಡೆ ತಟ್ಟುವುದಾಗಿ* ಹೇಳಿದ್ದರು. 

ಇದಕ್ಕೆ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಅಜೀವ ಸದಸ್ಯರು ಶನಿವಾರ ರಾತ್ರಿ  ಆಕ್ರೋಶ ವ್ಯಕ್ತಪಡಿಸಿದರು.  ಕೋರ್ಟಿಗೆ ಹೋದ ಅಜೀವ ಸದಸ್ಯರನ್ನು ದುಷ್ಟಕೂಟ ಎಂದು , ವೈಯುಕ್ತಿಕವಾಗಿ ಬಂದರೆ ತೊಡೆ ತಟ್ಟಲು ಸಿದ್ದ ಎಂದು  ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಹೇಳಿದ್ದಾಗಿ  ಪತ್ರಕರ್ತನೊಬ್ಬ ವರದಿ ಮಾಡಿದ್ದನ್ನು ಗಮನಿಸಿದ ಅಜೀವ ಸದಸ್ಯರು " ಇದು ಸಮ್ಮೇಳನದ  ಆಶಯ ನುಡಿಯ ಅರ್ಥ ಮತ್ತು  ಕನ್ನಡ ಭಾಷೆಯ ಹಾಗೂ  ಸಾಹಿತ್ಯದ ಗೌರವ ಕಳೆದಂತಾಗಿದೆ . ಸಮ್ಮೇಳನದ ವೇದಿಕೆಯಲ್ಲಿ  ತೊಡೆ ತಟ್ಟುವ ಅಹಂಕಾರದ  ಭಾಷೆ ಸಲ್ಲದು. ವೇದಿಕೆ ಉರಿಯುವ  ಭಾಷಣಕ್ಕಲ್ಲ. ಸಾಹಿತ್ಯ ಸಮ್ಮೇಳನವೆಂದರೆ ಸಂಸ್ಕಾರ, ಸಂವೇದನೆಯ ವೇದಿಕೆ. ಅಲ್ಲಿ ತೊಡೆ ತಟ್ಟುವ ಪದಗಳಿಗೆ ಅಹಂಕಾರಕ್ಕೆ ಜಾಗವಿಲ್ಲ. ಅಲ್ಲಿ ತಲೆತಗ್ಗಿಸಿ ಹೇಳುವ ಕೇಳುವ, ಕೇಳುವ ವಿನಯವೇ ; ನಿಜವಾದ ಶಕ್ತಿ. ಪದಗಳು ಪವಿತ್ರವಾಗಬೇಕಾದ ಸ್ಥಳದಲ್ಲಿ,  ದೇಹ ಭಾಷೆಯ ದರ​‍್ ಮಾತನಾಡಿದರೆ ಅದು ಸಾಹಿತ್ಯ ಎಲ್ಲ ಸಂಸ್ಕೃತಿಯ ಸೋಲು.

ಇದರಿಂದ ಅರ್ಥವಾಗೋದು - ಕನ್ನಡದ ಹೆಸರಲ್ಲಿ ಕೂಗು, ದರ​‍್, ನಡೆ ಇದು . *" ಅಭಿಮಾನ ಎಂದು ಬಿಂಬಿಸುವ ಪರರ ಕಾಂಚಾಣ ಮೇಲಿನ ದುರಹಂಕಾರ ನರ್ತನವೆಂದು"* ಅಜೀವ ಸದಸ್ಯರು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.ಇನ್ನು ಸಮ್ಮೇಳನದ  ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ,  ಉದ್ವಾಟನಾ ಕಾರ್ಯಕ್ರಮಕ್ಕೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಪೋಲಿಸ್ ವರಿಷ್ಠಾಧಿಕಾರಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರುಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.