ಚವ್ಹಾಣ ಮನೆಗೆ ಸಚಿವ ಜೋಶಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಚವ್ಹಾಣ ಮನೆಗೆ ಸಚಿವ ಜೋಶಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ Minister Joshi visits Chavan's house, consoles family

ಶಿಗ್ಗಾವಿ 09: ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮತ್ತು ಬಿ.ಜೆ.ಪಿ ರಾಜ್ಯ ಒ.ಬಿ.ಸಿ ಪ್ರಧಾನ ಕಾರ್ಯದರ್ಶಿ ದಿ ಸುಭಾಸ ಚವ್ಹಾಣ ಅವರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.    

ನಂತರ ಕುಟುಂಬದ ಸದಸ್ಯರಿಗೆ ನಿಮ್ಮೊಂದಿಗೆ ನಾನಿದ್ದೇನೆ ಧೈರ್ಯವಾಗಿರಿ, ಅಲ್ಲದೇ ಮಕ್ಕಳಿಗೆ ನೀವು ವಿದ್ಯಾಭ್ಯಾಸ ಮುಗಿದ ತಕ್ಷಣ ನನಗೆ ಭೇಟಿಯಾಗಿರಿ ಎಂದರು.    

ಈ ಸಂದರ್ಭದಲ್ಲಿ ದಿ ಸುಭಾಸ ಚವ್ಹಾಣ ಅವರ ತಾಯಿ, ಧರ್ಮ ಪತ್ನಿ ಹಾಗೂ ಮಕ್ಕಳು, ಸಹೋದರರು ಸೇರಿದಂತೆ ಯುವ ಮುಖಂಡ ಭರತ ಬೊಮ್ಮಾಯಿ, ನರಹರಿ ಕಟ್ಟಿ, ವಿಶ್ವನಾಥ ಹರವಿ, ತಿಪ್ಪಣ್ಣಾ ಸಾತಣ್ಣವರ, ಪರುಶರಾಮ ಸೊನ್ನದ ಟಿ.ವ್ಹಿ.ಸುರಗೀಮಠ, ಭರಮಜ್ಜ ನವಲಗುಂದ, ಡಾ.ಮಲ್ಲೇಶಪ್ಪ ಹರಿಜನ, ಆನಂದ ಸುಭೇಧಾರ, ಪ್ರತೀಕ ಕೊಳೇಕರ, ಅನಿಲ ಸಾತಣ್ಣವರ, ಹೊನ್ನಪ್ಪ ಹೂಗಾರ, ಬಸವರಾಜ ನಾರಾಯಣಪೂರ, ಚಂದ್ರು ಜವಳಿಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.