ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರಿಗೆ ಸನ್ಮಾನ

ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರಿಗೆ ಸನ್ಮಾನ Members of the Craftsmen's Grievance Redressal Committee honored

ಹಾವೇರಿ 27 : ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರುಗಳಾಗಿ ಆಯ್ಕೆಯಾದ ಗುತ್ತೆಪ್ಪ ಫಕ್ಕೀರ​‍್ಪ ಹರಿಜನ ಅವರನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮಾತನಾಡಿ ಜಿಲ್ಲೆಯಲ್ಲಿ ಚರ್ಮ ಕುಶಲಕರ್ಮಿಗಳ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಿತಿಯಲ್ಲಿ ಗುತ್ತೆಪ್ಪ ಹರಿಜನ,ಸುನಿಲ್ ಬೆಟಗೇರಿ,ಮಾರುತಿ ಹಂಜಗಿ,ಪೃಥ್ವಿರಾಜ ಬೆಟಗೇರಿ,ಹೆಚ್‌.ಡಿ.ಹೊನ್ನಕ್ಕಳವರ ಸದಸ್ಯರಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲು ಅವಕಾಶ ದೊರೆಕಿದ್ದು ಸಂತೋಷಕರವಾಗಿದೆ. 

ಈ ಎಲ್ಲಾ ಸದಸ್ಯರುಗಳಿಗೆ ಉತ್ತಮ ಕೆಲಸ ನಿರ್ವಹಣೆ ಮಾಡಲು ಸಹಕಾರ ನೀಡಲಾಗುವುದು. ಎಲ್ಲಾ ಸದಸ್ಯರಿಗೂ ಶುಭ ಕೋರಿ ನೂತನ ಸದಸ್ಯರನ್ನಾಗಿ ಮಾಡಲು ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಮುಖಂಡರಿಗೂ ಧನ್ಯವಾದಗಳನ್ನು ಉಡಚಪ್ಪ ಮಾಳಗಿ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗುತ್ತೆಪ್ಪ ಫಕ್ಕೀರ​‍್ಪ ಹರಿಜನ ಮಾತನಾಡಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ನಿವಾರಣಾ ಸಮಿತಿಯ ಸದಸ್ಯರನ್ನಾಗಿ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳು. ಉತ್ತಮವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಯಲ್ಲಾಪುರ,ಮಂಜಪ್ಪ ಮರೋಳ,ಭೀಮಣ್ಣ ಯಲ್ಲಾಪುರ,ಜಗದೀಶ ಹರಿಜನ,ಸಣ್ಣಪ್ಪ ಮೇಲ್ಮರಿ,ಗುಡ್ಡಪ್ಪ ಚಿಕ್ಕಪ್ಪನವರ,ಸಿಎಂ ಪಠಾಣ,ಹೊನ್ನಪ್ಪ ಮಾಳಗಿ,ಗುಡ್ಡಪ್ಪ ಮಾಳಗಿ,ಹನುಮಂತಪ್ಪ ಹೌಂಶಿ,ಮೇಘರಾಜ ಹರಿಜನ,ನವೀನ ಸಿದ್ದಣ್ಣನವರ ಸೇರಿದಂತೆ ಅನೇಕರಿದ್ದರು.