ಜು.18 ರಂದು ಬಳ್ಳಾರಿಗೆ ಮಂತ್ರಾಲಯ ಶ್ರೀಗಳ ಆಗಮನ

ಜು.18 ರಂದು ಬಳ್ಳಾರಿಗೆ ಮಂತ್ರಾಲಯ ಶ್ರೀಗಳ ಆಗಮನ  Mantralaya Sri's arrival in Ballari on July 18th

ಬಳ್ಳಾರಿ 17: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಪೀಠಾಧಿಪತಿಗಳಾದ ಪರಮ ಪೂಜ್ಯ 1008 ಶ್ರೀಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನಾಳೆ ಜು.18 ರಂದು ಬಳ್ಳಾರಿ ನಗರಕ್ಕೆ ದಯಮಾಡಿಸಲಿದ್ದಾರೆ. ನಗರದ ಶ್ರೀ ಸತ್ಯ ನಾರಾಯಣಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಬೆಳಿಗ್ಗೆ 8-30ಕ್ಕೆಶ್ರೀ ಸುದರ್ಶನ ಹೋಮ ನೆರವೇರಿಸಲಿದ್ದಾರೆ.  

ನಂತರ ಸದ್ಭಕ್ತರಿಗೆ ತಪ್ತಮುದ್ರ ಧಾರಣೆ ಮಾಡಲಿದ್ದಾರೆ. ಎಸ್‌.ಎನ್‌.ಪೇಟೆ 1ನೇ ಅಡ್ಡರಸ್ತೆಯಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಈ ಕಾರ್ಯಕ್ರಮ ನೆರವೇರಲಿದ್ದು ಸಕಲ ಸದ್ಭಕ್ತರು ಶ್ರೀಗಳ ದರ್ಶನಾಶೀರ್ವಾದ ಪಡೆದು ಧನ್ಯತೆಹೊಂದುವ0ತೆ ಶ್ರೀಮಠದ ಸಂಘಟಕರು ತಿಳಿಸಿದ್ದಾರೆ.