ಮಂಜುನಾಥ ಆರೆಂಟ್ನೂರಗೆ ಪಿಎಚ್‌.ಡಿ ಮಹಾಪ್ರಬಂಧ

ಮಂಜುನಾಥ ಆರೆಂಟ್ನೂರಗೆ ಪಿಎಚ್‌.ಡಿ  ಮಹಾಪ್ರಬಂಧ Manjunatha Arentnoor's Ph.D. thesis

ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಮಂಜುನಾಥ ಆರೆಂಟ್ನೂರು ಅವರ ವಾಲಿಬಾಲ್ ಮತ್ತು ಬಾಸ್ಕೆಟ್‌ಬಾಲ್ ಆಟಗಾರರ ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಪರಸ್ಪರ ಹೊಂದಾಣಿಕೆಗಳ ಮೇಲಿನ ಪರಿಣಾಮ ಕುರಿತ ಮಹಾಪ್ರಬಂಧಕ್ಕೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠಾವಾಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಜಲ್ನಾದ ಭಾರತ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ಭಕ್ತ ಡಿ.ಆರ್‌. ಮಾರ್ಗದರ್ಶನದಲ್ಲಿ ಮಂಜುನಾಥ ಅವರು ಮಹಾಪ್ರಬಂಧ ಮಂಡಿಸಿದರು.