ಮಹಾಂತೇಶ ಹಿಟ್ಟಿನಮಠಗೆ ಪಿತೃ ವಿಯೋಗ
Mahantesh Hittinmath's father passes away
ಮಹಾಲಿಂಗಪುರ 27: ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಪ್ರಭಾರಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಅವರ ತಂದೆ (ಮಲ್ಲಯ್ಯ ಅಪ್ಪಯ್ಯ ಹಿಟ್ಟಿನಮಠ ಅವರು ತಮ್ಮ 86ನೇಯ) ವಯಸ್ಸಿನಲ್ಲಿ ವಯೋ ಸಹಜತೆಯಿಂದ ಅಸುನೀಗಿದರು, ಅವರಿಗೆ 3 ಗಂಡು ಮಕ್ಕಳು,3 ಹೆಣ್ಣು ಮಕ್ಕಳು, ಪತ್ನಿ, ಸೊಸೆಯಂದರು, ಮೊಮ್ಮಕ್ಕಳು, ಅಳಿಯಂದರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದಿವಂಗತ ಮಲ್ಲಯ್ಯ ಅವರ ಅಂತ್ಯಕ್ರಿಯ ಗುರುವಾರ ಸಂಜೆ 4 ಘಂಟೆಗೆ ಸುಮಾರು 10, ಸಾವಿರಕ್ಕೂ ಹೆಚ್ಚು ಜನರೊಂದಿಗೆ ಜರುಗಿತು. ಹೆಸರಾಂತ ವ್ಯಾಪಾರಸ್ಥರಾಗಿದ್ದ ಇವರ ಗೌರವಾರ್ಥ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದವು. ಬಾಗಲಕೋಟ ಜಿಲ್ಲೆಯ ಮಹಾಂತೇಶ ಹಿಟ್ಟಿನಮಠ ಅಭಿಮಾನಿ ಬಳಗ, ಸ್ನೇಹಿತರು, ರಾಜಕೀಯ ನಾಯಕರಾದ ಜಮಖಂಡಿ ಶಾಸಕರಾದ ಜಗದೀಶ ಗುಡಗುಂಟಿ, ಸನದಿ ಶಿಕ್ಷಣ ಸಂಸ್ಥೆಯ ನಾಗಪ್ಪ ಸನದಿ, ಅಜಯ ಕಡಪಟ್ಟಿ, ನ್ಯಾಯವಾದಿ ಪ್ರಕಾಶ ವಸ್ತ್ರದ, ಯಲ್ಲನಗೌಡ ಪಾಟೀಲ, ಬಸನಗೌಡ ಪಾಟೀಲ, ಶೇಖರ ಅಂಗಡಿ, ಡಾ ಅಜೀತ ಕನಕರಡ್ಡಿ, ಡಾ ವಿಜಯ ಹಂಚಿನಾಳ, ಅಶೋಕ ಅಂಗಡಿ, ರಮೇಶ ಪಂಚಕಟ್ಟಿಮಠ, ನಾರಾಯಣ ಬರಮನಿ, ಆನಂದ ಕನಕರಡ್ಡಿ ಮುಂತಾದ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ವ್ಯಾಪಕ ಕಂಬನಿ: ಮಲ್ಲಯ್ಯ ಅವರ ನಿಧಾನಕ್ಕೆ ಚಿತ್ರದುರ್ಗದ ಸಂಸದರಾದ ಗೋವಿಂದ ಕಾರಜೋಳ, ಬಾಗಲಕೋಟ ಸಂಸದರಾದ ಪಿ ಸಿ ಗದ್ದಿಗೌಡರ, ತೇರದಾಳ ಶಾಸಕರಾದ ಸಿದ್ದು ಸವದಿ,ಮಾಜಿ ಸಚಿವರಾದ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪಿ ಎಚ ಪೂಜಾರ, ಶ್ರೀಕಾಂತ ಕುಲಕರ್ಣಿ, ಅರುಣ ಶಹಾಪುರ, ಶಾಂತಗೌಡ ಪಾಟೀಲ ಸೇರಿದಂತೆ ಇನ್ನು ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 