ಶಾಸಕ ರಾಜುಗೌಡ ಹುಟ್ಟುಹಬ್ಬ: ಅಂಧ ಮಕ್ಕಳಿಗೆ ಅನ್ನಪ್ರಸಾದ ಉಪಕರಣಗಳ ವಿತರಣೆ

ಶಾಸಕ ರಾಜುಗೌಡ ಹುಟ್ಟುಹಬ್ಬ: ಅಂಧ ಮಕ್ಕಳಿಗೆ ಅನ್ನಪ್ರಸಾದ ಉಪಕರಣಗಳ ವಿತರಣೆ  MLA Rajugowda's birthday: Distribution of Annaprasad equipment to blind children

ದೇವರಹಿಪ್ಪರಗಿ 14: ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ವಿಜಯಪುರದ ಶ್ರೀ ಶಿವಶರಣ ಹರಳಯ್ಯ ವಿದ್ಯಾವರ್ಧಕ ಅಂಧ ಸಂಸ್ಥೆ, ಅಂಧ ಮಕ್ಕಳ ಪ್ರಾಥಮಿಕ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಒಂದು ದಿನದ ಅನ್ನಪ್ರಸಾದ ಹಾಗೂ ಉಪಕರಣಗಳನ್ನು ವಿತರಣೆ ಮಾಡಲಾಯಿತು. 

ನಂತರ ಯುವ ಮುಖಂಡ ಅಕ್ಷಯ ಗೊಬ್ಬರ ಅವರು ಮಾತನಾಡಿ, ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಪ್ರಥಮ ಬಾರಿ ಶಾಸಕರಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸಹಾಯ ಮಾಡಿದ್ದಾರೆ, ಅವರು ಹುಟ್ಟು ಹಬ್ಬದ ಆಚರಣೆ ಬೇಡ ಎಂದಿದ್ದಾರೆ ನಾವೆಲ್ಲ ಸ್ನೇಹಿತರು ಕೂಡಿ ಅಂಧ ಶಾಲಾ ಮಕ್ಕಳಿಗೆ ಕೈಲಾದ ಸಹಾಯ ಮಾಡಿ,ಶಾಸಕರುಉತ್ತಮ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿರುವ ಅವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಇನ್ನು ಹೆಚ್ಚಿನ ಶಕ್ತಿ ಕೊಡಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಶಾಶು ಬಾಗಲಕೋಟ, ಮಹೇಶ ಬಾಗೇವಾಡಿ, ಕುಮಾರ ಮಾಳನೂರ, ನವೀನ್ ಕುಲಕರ್ಣಿ, ದರ್ಶನ ಗುನ್ನಾಪುರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.