ಚಿರತೆ ದತ್ತು ಪಡೆಯುವ ಮೂಲಕ ಶಾಸಕ ಮಾನೆ ಜನ್ಮದಿನ ಆಚರಣೆ

ಚಿರತೆ ದತ್ತು ಪಡೆಯುವ ಮೂಲಕ ಶಾಸಕ ಮಾನೆ ಜನ್ಮದಿನ ಆಚರಣೆ MLA Mane's birthday celebration by adopting a leopard

ಹಾನಗಲ್ 12 :ಶಾಸಕ ಶ್ರೀನಿವಾಸ ಮಾನೆ ಅವರ 51 ನೇ ಜನ್ಮದಿನದ ನೆನಪಿಗಾಗಿ ಕಾಂಗ್ರೆಸ್ ಮುಖಂಡರು ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಲ್ಲಿನ ಭಾರತೀಯ ಚಿರತೆಯೊಂದನ್ನು ದತ್ತು ಪಡೆಯುವ ಮೂಲಕ ಮಹತ್ವದ ಸಂದೇಶ ನೀಡಿದ್ದಾರೆ. 

ಜನ್ಮದಿನ ಅಂದರೆ ಕೇಕ್ ಕತ್ತರಿಸುವುದು, ಭೋಜನ ಕೂಟ ಏರಿ​‍್ಡಸುವುದು, ಇತರ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ. ಆದರೆ ಕಾಂಗ್ರೆಸ್ ಮುಖಂಡು ನೆಚ್ಚಿನ ನೇತಾರನ ಜನ್ಮದಿನವನ್ನು ಚಿರತೆ ದತ್ತು ಪಡೆಯುವ ಮೂಲಕ ವಿಭಿನ್ನವಾಗಿ ಆಚರಿಸಿ ಗಮನ ಸೆಳೆದು ಮಾದರಿಯಾಗಿದ್ದಾರೆ. 

ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ದೇಸಾಯಿ, ಮುಖಂಡರಾದ ಸಂತೋಷ ಜಕ್ಕಪ್ಪನವರ ಮತ್ತು ಅಬ್ದುಲ್‌ವಹಾಬ ಗನಿ ಚಿರತೆ ದತ್ತು ಸ್ವೀಕರಿಸಿ, ಸಾಮಾಜಿಕ ಕಳಕಳಿ ಮೆರೆದಿದ್ದಾರೆ.