‘ಶಿವಶರಣರ ಸಾಮಾಜಿಕ ಪ್ರಜ್ಞೆ’ ಉಪನ್ಯಾಸ ಕಾರ್ಯಕ್ರಮ

 ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ಉಪನ್ಯಾಸ ಕಾರ್ಯಕ್ರಮ	Lecture Program on 'Social Consciousness of Shiva Sharan'

ಲೋಕದರ್ಶನ ವರದಿ 

‘ಶಿವಶರಣರ ಸಾಮಾಜಿಕ ಪ್ರಜ್ಞೆ’ ಉಪನ್ಯಾಸ ಕಾರ್ಯಕ್ರಮ  

  

ಧಾರವಾಡ 09:  ಕರ್ನಾಟಕ ವಿದ್ಯಾವರ್ಧಕ ಸಂಘವು, ಇಮೆರಿಟಸ್ ಪ್ರೊಫೆಸರ್ ಸಿ. ಆರ್‌. ಯರವಿನತೆಲಿಮಠ ದತ್ತಿ ಅಂಗವಾಗಿ ದಿ. 10ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಶಿವಶರಣರ ಸಾಮಾಜಿಕ ಪ್ರಜ್ಞೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಏರಿ​‍್ಡಸಿದೆ. 

ಧಾರವಾಡ ಧಾರವಾಡದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ  ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವೀಣಾ ಯಲಿಗಾರ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. 

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು.   

ಧಾರವಾಡ ಇಮೆರಿಟಸ್ ಪ್ರೊಫೆಸರ್ ಸಿ.ಆರ್‌. ಯರವಿನತೆಲಿಮಠ ಮತ್ತು ಬೆಳಗಾವಿಯ ವಿದ್ವಾಂಸ ಡಾ. ಗುರುದೇವಿ ಹುಲೆಪ್ಪನವರಮಠ ಗೌರವ ಉಪಸ್ಥಿತರಿರುವರು.  

 ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.