ಕಳೆದ ರಾತ್ರಿ ಸುರಿದ ಜಿಟಿಜಿಟಿ ಮಳೆಗೆ ನೆಲಕಚ್ಚಿದ ಭತ್ತ : ಆತಂಕದಲ್ಲಿ ಅನ್ನದಾತ
Last night's GTGT rains caused paddy fields to be destroyed: Food providers in panic
ಲೋಕದರ್ಶನ ವರದಿ
ಕಳೆದ ರಾತ್ರಿ ಸುರಿದ ಜಿಟಿಜಿಟಿ ಮಳೆಗೆ ನೆಲಕಚ್ಚಿದ ಭತ್ತ : ಆತಂಕದಲ್ಲಿ ಅನ್ನದಾತ
ಕಂಪ್ಲಿ 03: ಕಳೆದ ರಾತ್ರಿ ಸುರಿದ ಜಿಟಿ ಜಿಟಿ ಮಳೆ ಸಹಿತ ಗಾಳಿಗೆ ಭತ್ತ, ಬಾಳೆ ಬೆಳೆಗಳು ನೆಲಕಚ್ಚಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಕಂಪ್ಲಿ ಪಟ್ಟಣ, ರಾಮಸಾಗರ, ನಂ.10 ಮುದ್ದಾಪುರ, ಸಣಾಪುರ, ದೇವಸಮುದ್ರ, ನೆಲ್ಲುಡಿ, ಇಟಗಿ ಸೇರಿದಂತೆ ನಾನಾ ಭಾಗದಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ರೈತರ ಬದುಕಿಗೆ ತಣ್ಣೀರು ಎರಚುವಂತಾಗಿದೆ.
ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಗುಡುಗು, ಸಿಡಿಲು ಸಹಿತ ಮಳೆಗೆ ರೈತರು ಬೆಳೆದ ಬೆಳೆಗಳು ಭೂಮಿ ಪಾಲಾಗುವಂತಾಗಿದ್ದು, ಕೈಯಿಗೆ ಬಂದ ಕುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 4.2 ಮಿ.ಮೀಟರ್ ಮಳೆಯಾಗಿದ್ದು, ದೊಡ್ಡ ಮಳೆ ಅಲ್ಲದಿದ್ದರೂ ಜಿಟಿ ಜಿಟಿಗೆ ಮಳೆಗೆ ಅಲ್ಲಲ್ಲಿ ಭತ್ತದ ಗದ್ದೆಗಳು ನೆಲಕ್ಕುರುಳಿರುವುದು ಕಂಡು ಬಂತು. ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ಕೆಲ ರೈತರ ಭತ್ತದ ಬೆಳೆಗಳು ನೆಲಕ್ಕೆ ಬಿದ್ದಿದ್ದು, ತೆನೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಮತ್ತು ಬಾಳೆ ಕಂಬಗಳು ಬಾಗಿದ್ದು, ಬಂಬುಗಳಿಂದ ರಕ್ಷಿಸಿಕೊಳ್ಳುವ ಪರಿಸ್ಥಿತಿ ರೈತರದ್ದಾಗಿದೆ.
ಈಗಾಗಲೇ ಕೆಲ ರೈತರ ಹೊಲಗಳಲ್ಲಿ ಬೆಳೆದ ಭತ್ತದ ಫಸಲು ಬಂದಿದ್ದು, ಇನ್ನೇನು ಒಂದೆರಡು ವಾರದಲ್ಲಿ ಕಟಾವು ಮಾಡಲಿದ್ದಾರೆ. ಆದರೆ, ಈಗಿನ ಮಳೆಗೆ ರೈತರಿಗೆ ದಿಕ್ಕು ದೋಚದಂತಾಗಿದ್ದು, ಮತ್ತಷ್ಟು ಮಳೆ ಬಂದರೆ, ಬೆಳೆಗಳು ಸಂಪೂರ್ಣವಾಗಿ ಹಾಳಾಗುವ ಆತಂಕ ಮನೆ ಮಾಡಿದ್ದು, ಫಸಲು ಕಟಾವು ಆಗುವತನಕ ಮಳೆ ಬಾರದಂತೆ ದೇವರ ಮೊರೆ ಹೋಗುವಂತಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 