ಮಂಜುಶ್ರೀ ಶಿಶುವಿಹಾರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

ಮಂಜುಶ್ರೀ ಶಿಶುವಿಹಾರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ  Krishna Janmashtami Celebration at Manjushree Nursery School

ಲೋಕದರ್ಶನ ವರದಿ 

ಧಾರವಾಡ, ಸೆ. 3: ನಗರದ ವಿದ್ಯಾರ್ಥಿಯ ಜೆ.ಎಸ್‌.ಎಸ್‌. ಕನ್ನಡ ಮಾಧ್ಯಮ ಮಂಜುಶ್ರೀ ಶಿಶುವಿಹಾರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮುದ್ದು ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಸಂಭ್ರಮಿಸಿದರು. ಮಕ್ಕಳ ವೇಷಭೂಷಣ ಹಾಗೂ ವಿವಿಧ ಚಟುವಟಿಕೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.  ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಶ್ರೀ ಅರಿಹಂತ ಪ್ರಸಾದ್, ಎಲ್‌ಐಟಿ ಕಾಲೇಜಿನ ಪ್ರಾಚಾರ್ಯ ಶ್ರೀ ಮಹಾವೀರ ಉಪಾಧ್ಯೆ ಹಾಗೂ ಪ್ರಾಚಾರ್ಯೆ ಸುಧಾಮಣಿ ರಾವ್ ಉಪಸ್ಥಿತರಿದ್ದರು.