ಕೊಪ್ಪಳದ ಶ್ರೀಕಾಂತ್ ಕಲಾಲ್ ತಂಡಕ್ಕೆ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನ

Koppal's Srikanth Kalal won the first place in the karate competition at the state level

ಕೊಪ್ಪಳದ ಶ್ರೀಕಾಂತ್ ಕಲಾಲ್ ತಂಡಕ್ಕೆ ಕರಾಟೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಥಮ ಸ್ಥಾನ 

   ಕೊಪ್ಪಳ 11: ಮೈಸೂರ ದಲ್ಲಿ ನಡೆದ ವಾಡೋರಿಯ ಕರಾಟೆ ಡು ಅಸೋಸಿಯೇಷನ್ ಏರಿ​‍್ಡಸಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಶ್ರೀಕಾಂತ್ ಕಲಾಲ್ ತಂಡಕ್ಕೆ ಪ್ರಥಮ  ಸ್ಥಾನ ಲಭಿಸಿದೆ.  ಕೊಪ್ಪಳದ ಸಾಯಿ ಬುಡೊಕಾನ್ ಕರಾಟೆ ಸಂಸ್ಥೆ ಸುಮಾರು ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಾ ಬಂದಿದ್ದು ಹಾಗೂ ಅನೇಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವ ಸಂಸ್ಥೆ ಅಂತಹ ಸಂಸ್ಥೆ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹನುಮಂತ ಮುಂಡರಗಿ ಹಾಗೂ ಗೀರೀಶ್ ಮುಂಡರಗಿ ಎಂಬ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.  ಈ ವೇಳೆ ಸಾಯಿ ಬುಡಕನ್ ಕರಾಟೆ ಸಂಸ್ಥೆ ಮುಖ್ಯಸ್ಥ ಶ್ರೀಕಾಂತ್ ಕಲಾಲ್ ಹಾಗೂ ಸೈಯದ್ ಹೂಗಾರ್ ತರಬೇತಿದಾರರಾದ ಮೌಲಾ ಮುಂಡರಗಿ ಅಗಸ್ತ್ಯ ಅರಕೇರಿ ಉಪಸ್ಥಿತರಿದ್ದರು.