ಕೆಎಲ್ಈ ಸಂಸ್ಥೆಯ ಉಚಿತ ಆರೋಗ್ಯ ತಪಾಸಣಾ ಶಿಬಿರ
KLE Institute's free health check-up camp
ಮಾಂಜರಿ 16 : ಸರ್ವಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ಕೆಎಲ್ಇ ಸಂಸ್ಥೆಯ ಮುಖಾಂತರ ಆರೋಗ್ಯ ಕ್ಷೇತ್ರದಲ್ಲಿ ಕಹಾನಿಯ ಸಾಧನೆ ಮಾಡಲಾಗಿದೆ ಅದರ ಜೊತೆಗೆ ಗ್ರಾಮೀಣ ಭಾಗದ ಎಲ್ಲ ಜನರ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯುವರು ಆರೋಗ್ಯಕ್ಕೆ ಹೆಚ್ಚಿನ ಅಗತ್ಯ ನೀಡುತ್ತಿದ್ದಾರೆ ಎಂದು ಚಿಕ್ಕೋಡಿಯ ಕೆಎಲ್ಈ ಸಂಸ್ಥೆಯ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಸೂರಜ ಕುಂಬಾರ್ ಹೇಳಿದರು
ಅವರು ಸೋಮವಾರ ರಂದು ಸಮೀಪದ ಕುಸಣಾಳ ಗ್ರಾಮದಲ್ಲಿ ಶಿರಗುಪ್ಪಿ ಗ್ರಾಮದಲ್ಲಿರುವ ಕೆಎಲ್ಇ ಸಂಸ್ಥೆಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ವತಿಯಿಂದ ಅಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮುಖ್ಯ ಅಧ್ಯಾಯಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಏಕೆ ಜಯಿವೀರ್ ವಹಿಸಿದ್ದರು ಅತಿಥಿಯಾಗಿ ಉಪನ್ಯಾಸಕರಾದ ಬಿಆರ್ ನರವಾಡೇ ಯೋಗಿ ಪರಂಜಬಿ ಎಸ್ಎಸ್ ಕವಲಗುಡ್ಡ ಸಿಬಿ ಕರಿಗಾರ್ ಹಾಜರಿದ್ದರು.
ಈ ವೇಳೆ ಆಯುರ್ವೇದಿಕ್ ಮಹಾವಿದ್ಯಾಲಯದ ಡಾ. ಸೂರಜ ಕುಂಬಾರ್ ಇವರು ಶಿಬಿರಾರ್ಥಿಗಳಿಗೆ ನಶಾಮುಕ್ತ ಭಾರತ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಮಹಾವಿದ್ಯಾಲಯದ ಇನ್ನಿತರ ವೈದ್ಯರಿಂದ ಜನರ ಆರೋಗ್ಯ ತಪಾಸಣೆ ನೀಡಿ ಅವರಿಗೆ ಸಲಹೆ ಮತ್ತು ಉಚಿತ ಓಷದ ನೀಡಲಾಯಿತು ಗಾಯತ್ರಿ ಬಡಿಗೇರ್ ಪ್ರಸ್ತಾವಿಕವಾಗಿ ಮಾತನಾಡಿ ರಾಧಿಕಾ ಚಿಂಚಲಿ ನಿರೂಪಿಸಿ ವೀಣಾ ಕೋಳಿ ಸ್ವಾಗತಿಸಿ ಸಾಕ್ಷಿ ಪಾಟೀಲ್ ಹೊಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 