ಜನವರಿ ಸಂತೆ ತಾತ್ಕಾಲಿಕ ಸ್ಥಳಾಂತರ; ಸಾರ್ವಜನಿಕರು ಸಹಕರಿಸಲು ಮನವಿ

ಜನವರಿ ಸಂತೆ ತಾತ್ಕಾಲಿಕ ಸ್ಥಳಾಂತರ; ಸಾರ್ವಜನಿಕರು ಸಹಕರಿಸಲು ಮನವಿ January festival temporarily relocated; public requested to cooperate

ಯರಗಟ್ಟಿ 26 : ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ 12-00 ಗಂಟೆಗೆ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಸಮಾರಂಭ (ಶಂಕು ಸ್ಥಾಪನೆ) ಹಾಗೂ ತಾಲೂಕಾ ಪಂಚಾಯತಿ ಕಛೇರಿಯ ಉದ್ಘಾಟನೆ ಕಾರ್ಯಕ್ರಮದ ನಿಮಿತ್ಯ ಎಪಿಎಂಸಿ ಆವರಣದಲ್ಲಿ ಶನಿವಾರ ಜರುಗಲಿರುವ ಜಾನುವಾರ ಸಂತೆಯನ್ನು ಗೋಕಾಕ ರಸ್ತೆಯ ಜಕಾತಿ ಕಾಲೇಜಿನ ಪಕ್ಕದಲ್ಲಿ ಇರುವ ಉಪ್ಪಿನ ಅವರ ಜಾಗದಲ್ಲಿ ಸ್ಥಳಾಂತರಿಸಲಾಗಿದೆ. ಆದಕ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ತಹಶೀಲ್ದಾರ ಎಮ್ ವ್ಹಿ. ಗುಂಡಪ್ಪಗೋಳಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  

ಉದ್ಘಾಟಕರಾಗಿ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ, ಶಾಸಕರು ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕ ವಿಶ್ವಾಸ ವೈದ್ಯ ಹಾಗೂ ರಾಜಕೀಯ ಮುಖಂಡರು, ಗಣ್ಯ ಮಾನ್ಯರು ಆಗಮಿಸಲ್ಲಿದ್ದಾರೆ.ಈ ವೇಳೆ ತಹಸೀಲ್ದಾರ ಎಮ್‌. ವ್ಹಿ. ಗುಂಡಪ್ಪಗೋಳ, ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ, ಸಿ ಪಿ.ಐ ಆಯ.ಎಮ್‌. ಮಠಪತಿ, ಪುರಸಭೆ ಅಧಿಕಾರಿ ಮಹೇಶ ಕೋಳಿ,ಎ.ಪಿ.ಎಮ್‌.ಸಿ ಅಧ್ಯಕ್ಷ ಶ್ರೀ ನೀಲಕಂಠ ಶಿದಬಸಣ್ಣವರ ಹಾಜರ ಇದ್ದರು.