ಸಂವಿಧಾನ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ನಾಗಲಕ್ಷ್ಮಿ ಮಿಸ್ಕಿನ್
ಯಲಬುರ್ಗಾ 28: ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಆಗದ ಹಾಗೆ ಗೌರವಯುತವಾಗಿ ನಾವೆಲ್ಲರೂ ಸಂವಿಧಾನವನ್ನ ಗೌರವಿಸಬೇಕು ಮತ್ತು ಸಂವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಶಾಲೆಯ ಪ್ರಾಂಶುಪಾಲರು ನಾಗಲಕ್ಷ್ಮಿ ಮಿಸ್ಕಿನ್ ಮಕ್ಕಳಿಗೆ ಹೇಳಿದರು.
ಅವರು ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿ ಸಮರೆ್ಣ ಮಾಡುತ್ತಿರುವ ಅಣಕು ಪ್ರದರ್ಶನ ಮಕ್ಕಳಿಂದ ಮಾಡಿಸಿ ಸಂವಿಧಾನದ ಮಹತ್ವ ತಿಳಿಸಲಾಯಿತು. ಮಕ್ಕಳು ಸಂವಿಧಾನದ ಪೀಠಿಕೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಾಲೆಯಲ್ಲಿ ಸಂವಿಧಾನ ದಿನವನ್ನು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರ ಪೂಜಿಸುವುದರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ವೇಳೆ ಹನುಮಪ್ಪ ಉಪ್ಪಾರ್, ಕಲ್ಲಿನಾಥಯ್ಯ ಹಿರೇಗೌಡರ್, ಸಾಹೇಬ್ ಗೌಡ ಆರ್ , ಬಸವಕುಮಾರ್ ಕೆ, ಗವಿಸಿದ್ದಪ್ಪ ಕೆ ,ವೃಂದ ಸೇಟ್ ಸಾವಿತ್ರಿ ಡಂಬಳ , ಭಾಗ್ಯಶ್ರೀ ಎಮ್, ಶ್ರೀದೇವಿ ಎಸ್, ಪೂರ್ಣಿಮಾ ಎಸ್, ಸುಂದರ ಜೋಶಿ, ಜ್ಯೋತಿ ಎಸ್, ಶಿವರಾಜ್ ಕುಂಬಾರ್ ಹಾಗೂ ವಿದ್ಯಾರ್ಥಿಗಳ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 