ಬಿ.ಇ.ಒ.ಗಳಿಗೆ ಗೌರವ ಸನ್ಮಾನ

ಬಿ.ಇ.ಒ.ಗಳಿಗೆ ಗೌರವ ಸನ್ಮಾನ  Honorary Felicitation for BEOs

ಶಿಗ್ಗಾಂವಿ, ಜು.11: ಪಟ್ಟಣದ ಶ್ರೀಕಾಂತ ದುಂಡಿಗೌಡ್ರ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಅವರಿಗೆ ದೊರೆತ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ ಬನ್ನೂರಿನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ಶ್ರೀನಿವಾಸ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಾವೇರಿಗೆ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಇಬ್ಬರಿಗೂ ಗೌರವ ಸನ್ಮಾನ ನೆರವೇರಿಸಲಾಯಿತು.  ಕಾರ್ಯಕ್ರಮದಲ್ಲಿ ಶ್ರೀಕಾಂತ ದುಂಡಿಗೌಡ್ರ, ರಮೇಶ್ ಸಾತಣ್ಣವರ, ಬೋದಣ್ಣ ಬೆಳಗಲಿ ಸೇರಿದಂತೆ ಬನ್ನೂರು ಗ್ರಾಮದ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.