ಹೆಲ್ಮೆಟ್ ಕಡ್ಡಾಯ: ಲೈಸನ್ಸ್ ಇಲ್ಲದೆ ಮಕ್ಕಳಿಗೆ ಬೈಕ್ ಕೊಡಬೇಡಿ: ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ
Helmets are mandatory: Don't give bikes to children without a license: DySP Gopalakrishna Gowda
ವಿಭಾಶ್ರೀ ಹೊಂಡಾ ಶೋರೂಮಿನಲ್ಲಿ ಹೊಸ ಬೈಕ್ ಬಿಡುಗಡೆ
ಚಿಕ್ಕೋಡಿ 17: ಹೊಂಡ ಕಂಪನಿಯ ಬೈಕ್ ಗ್ರಾಮೀಣ ಜನತೆಗೆ ಅಚ್ಚುಮೆಚ್ಚಿನ ವಾಹನವಾಗಿದೆ. ಆದರೆ ರಸ್ತೆ ನಿಯಮ ಪಾಲನೆ ಅತ್ಯಂತ ಮುಖ್ಯ. ಪೋಷಕರು ಮಕ್ಕಳಿಗೆ ಲೈಸನ್ಸ್ ಇಲ್ಲದೆ ಬೈಕ್ ಕೊಡಬಾರದು. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಬೇಕು ಮತ್ತು ವಾಹನ ಖರೀದಿಸುವಾಗ ಇನ್ಸುರೆನ್ಸ್ ಕಡ್ಡಾಯವಾಗಿರಬೇಕು ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಹೇಳಿದರು.
ಇಲ್ಲಿನ ವಿಭಾಶ್ರೀ ಹೊಂಡಾ ಶೋರೂಮಿನಲ್ಲಿ ಶೈನ್ 100 ಡಿಎಕ್ಸ್ ದ್ವಿಚಕ್ರ ವಾಹನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಕಾರ್ಯಕ್ರಮ ಉದ್ಘಾಟಿಸಿದರು. ಆರ್ಟಿಓ ಮಂಜುನಾಥ ಶಿರೋಳೆ, ಸಿಪಿಐ ವಿಶ್ವನಾಥ ಚೌಗಲಾ, ಸಿಟಿಇ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಪ್ರವೀಣ ಶರ್ಮಾ (ಜೋನಲ್ ಹೆಡ್), ಏರಿಯಾ ಮ್ಯಾನೇಜರ್ ಜುನಾಥ ಪಾಟೀಲ ಮಾತನಾಡಿದರು.ಮಾಲಿಕ ವಿ.ಎಸ್. ಮಾಂಜ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಳೆದ 17 ವರ್ಷಗಳಿಂದ ನಾವು ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದೇವೆ. ಈ ನಂಬಿಕೆಯೇ ನಮ್ಮ ಬಲವಾಗಿದೆ” ಎಂದರು.
ಸಮಾರಂಭದಲ್ಲಿ ಚೇತನ ಲಗಾರೆ, ಬಿಸಿ ಪಾಟೀಲ, ಈರಣ್ಣಾ ಉಮರಾಣಿ, ಸುನೀಲ ಶಿಂಧೆ, ಪ್ರಸಾದ ಜೋಶಿ, ಬಾಳಾಸಾಹೇಬ, ಆನಂದ ಆರ್ವಾರೆ, ಜಿ.ಟಿ. ಬೋಕೆ, ಆರ್.ವೈ. ಚಿಕ್ಕೋಡಿ, ಅಜೀತ ಚರಾಟೆ, ಉತ್ತಮ ಶಿಂಧೆ, ಮಿಥುನ ದೇಶಪಾಂಡೆ, ಮಹಾಂತೇಶ ಮಲಾಬಾಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರುಶೋರೂಮ್ ಮಾಲಿಕ ಸಂಕೇತ ಮಾಂಜ್ರೇಕರ ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಣೆಯನ್ನು ಎನ್.ವ್ಹಿ. ಶಿರಗಾಂವಕರ ನಿರ್ವಹಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 