ಸಿಂದಗಿ 08; ಕಳೆದ 2023 ರ ಸಿಂದಗಿ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಗೂಗಿಹಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಗೂಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಕೊಟ್ಟ ಮಾತಿನಂತೆ ಇಂದು ಗೂಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸಲು ಸತತವಾಗಿ ಹಗಲಿರುಳು ಶ್ರಮಿಸಿರುವ ಪ್ರಯುಕ್ತ ಗ್ರಾಮದ ಹಿರಿಯರಾದ ಮಾಬುಬಿ ಚೌದರಿ ರವರು ಶಾಸಕ ಅಶೋಕ ಮನಗೂಳಿ ಅವರಿಗೆ ಸಿಹಿ ತಿನ್ನಿಸುವದರ ಮೂಲಕ ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಕಾಂತನಗೌಡ ಪಾಟೀಲ, ಮಾಜಿ ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ, ಹಮಿದ ಚೌದ್ರಿ, ಲಕ್ಷ್ಮಣ ಗುಗಿಹಾಳ, ಚಾಂದ ಕಸಾಬ, ಮಾಶ್ಯಕ ಕಸಬ್, ಸೈಪಾಂ ಕಸಬ್, ಸೈಪನ ಚೌದ್ರಿ, ಗುಲಾಮ ಕೊರಬು, ಮಾಬುಬಿ ಚೌದರಿ, ವಜೀರ ಗುಗಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.