ಹರಿಜಾತ್ರೆಯಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಸನ್ಮಾನ

ಹರಿಜಾತ್ರೆಯಲ್ಲಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಸನ್ಮಾನ  Felicitation of volunteers who served at the Hari Jatra


ಗದಗ  31: 18 ವರ್ಷಗಳ ನಂತರ ಅದ್ದೂರಿಯಾಗಿ ಜರುಗಿದ ಗದುಗಿನ ಗ್ರಾಮ ದೇವತೆಯರಾದ  ಶ್ರೀ ದ್ಯಾಮವ್ವ ಹಾಗೂ ಶ್ರೀ ದುರಗಮ್ಮ ದೇವಿಯರ ಹರಿಜಾತ್ರೋತ್ಸವದಲ್ಲಿ ಕಾರ್ಯಕರ್ತರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲ ಹಿರಿಯ-ಕಿರಿಯ ಮಹನೀಯರಿಗೆ  ಕಮೀಟಿಯಿಂದ ಸನ್ಮಾನಿಸಲಾಯಿತು.  

 ಈ ಸಂದರ್ಭದಲ್ಲಿ ಹರಿ ಜಾತ್ರೋತ್ಸವ ಕಮೀಟಿಯ ಅಧ್ಯಕ್ಷರಾದ ಕೊಟ್ರ​‍್ಪ ಕಮತರ, ಕಾರ್ಯಾಧ್ಯಕ್ಷರಾದ ಫಕ್ಕೀರ​‍್ಪ ಹೆಬಸೂರ, ಉಪಾಧ್ಯಕ್ಷರಾದ ಪ್ರಶಾಂತ ಶಾಬಾದಿಮಠ,  ಸಹ ಕೋಶಾಧ್ಯಕ್ಷ ವಿರುಪಾಕ್ಷಪ್ಪ ಅಕ್ಕಿ, ಸಹ ಸಂಘಟನಾ ಕಾರ್ಯದರ್ಶಿ ಹೇಮಂತ ಗಿಡ್ಡಹನುಮಣ್ಣನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.