ಬೆಸಿಗೆ ನೀರು ಬಿಡಬೇಕೆಂದು ರೈತರ ಮನವಿ

ಬೆಸಿಗೆ ನೀರು ಬಿಡಬೇಕೆಂದು ರೈತರ ಮನವಿ  Farmers' request to release water for summer


ಹೊಸಪೇಟೆ, ವಿಜಯನಗರ 12: ತುಂಗಭದ್ರ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಯ ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಾಲುವೆಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಆಲೂರು, ಆದೋನಿ, ಮತ್ತು ಎಮ್ಮಿಗನೂರು ತಾಲೂಕುಗಳ ಶಾಸಕರುಗಳು ಮತ್ತು ರೈತ ಮುಖಂಡರು ಈ ಕಾಲುವೆಗೆ ಬೇಸಿಗೆ ಬೆಳೆಗೆ ನೀರುಬೇಕೆಂದು ಒಮ್ಮತದ ತೀರ್ಮಾನ ತೆಗೆದುಕೊಂಡು ಕರ್ನೂಲ್ ಜಿಲ್ಲಾಧಿಕಾರಿಗಳ ಮುಖಾಂತರ ತಮಗೆ ಮನವಿ ಸಲ್ಲಿಸಿದ್ದಾರೆ.  

ರೈತ ಸಂಘ ಕರ್ನಾಟಕದ ಬಳ್ಳಾರಿ ಜಿಲ್ಲೆಯ ನಾವುಗಳು ಜಿಲ್ಲಾ  ಉಸ್ತುವಾರಿ ಸಚಿವರಿಗೂ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳಿಗೂ ಈ ಕಾಲುವೆ ಮುಖಾಂತರ ಬೆಸಿಗೆ ಬೆಳೆಗೆ ನೀರು ಬೇಕೆಂದು ತುಂಗಭದ್ರ ಬೊರ್ಡ್‌ಗೆ ಮನವಿ ಮಾಡಿದ್ದೇವೆ. ಕರ್ನಾಟಕ ಹಾಗೂ ಆಂದ್ರ ಪ್ರದೇಶದ ಜಂಟಿಯಾಗಿರುವ ಈ ಕಾಲುವೆಗೆ ಕೇವಲ ಆಂದ್ರ​‍್ರದೇಶದ ಪಾಲಿನ ನೀರನ್ನು ಮಾತ್ರ ಬಿಟ್ಟು ರೈತರ ಮಧ್ಯೆ ಗಲಬೆ ತರಬೇಡಿ. ಬೇಸಿಗೆ ಬೆಳೆಗೆ ಮಾರ್ಚ್‌-30ರವರೆಗೂ ಕರ್ನಾಟಕ ಮತ್ತು ಆಂದ್ರ ಪ್ರದೇಶದ ಜಂಟಿ ನೀರನ್ನು ಬಿಡಬೇಕೆಂದು ತುಂಗಭದ್ರ ರೈತ ಸಂಘ ವಿನಂತಿಸಿದ್ದಾರೆ.