ಕೊಲ್ಲಿ ನಾಗೇಶ್ವರರಾವ್ ಪದವಿ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ ಬದುಕು ಕುರಿತ ಪ್ರಬಂಧ ಸ್ಪರ್ಧೆ

ಕೊಲ್ಲಿ ನಾಗೇಶ್ವರರಾವ್ ಪದವಿ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ ಬದುಕು ಕುರಿತ ಪ್ರಬಂಧ ಸ್ಪರ್ಧೆ Essay competition on Ambedkar's life at Kolli Nageshwara Rao Graduate College

ಗಂಗಾವತಿ 14:   ಕೊಲ್ಲಿ ನಾಗೇಶ್ವರರಾವ್ ಪದವಿ ಮಹಾವಿದ್ಯಾಲಯದಲ್ಲಿ ಇಂದು  ಅಂಬೇಡ್ಕರ ಬದುಕು ಮತ್ತು ಹೋರಾಟ ಕುರಿತ  ಪ್ರಬಂಧ ಸ್ಪರ್ಧೆ ನಡೆಯಿತು. ರಾಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.  600 ಪದಗಳಿಗೆ ಪ್ರಬಂಧ ಬರಹವನ್ನು ನಿಗದಿ ಮಾಡಲಾಗಿತ್ತು.ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಕೆ.ಎಸ್ ಹಾಗೂ ಇತರ ಸಹ ಪ್ರಾದ್ಯಾಪಕರ ನೇತೃತ್ವದಲ್ಲಿ ಸ್ಪರ್ಧೆ ನಡೆಯಿತು. ಈ ವೇಳೆ ಮಾತನಾಡಿದ ಮಂಜುನಾಥ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾಗುವ ಪ್ರಬಂಧ ಬರಹ ವಿಷಯದಲ್ಲಿ ಪರಿಣಿತ ಒದಗಿಸಲು  ಈ ಸ್ಪರ್ಧೆ ಆಯೋಜಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು. .ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣಪತ್ರ ಸಹ ಒದಗಿಸಲಾಯಿತು.