ವಿಪ್ರ ಸಮಾಜದ ಚಿದಂಬರ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ

ವಿಪ್ರ ಸಮಾಜದ ಚಿದಂಬರ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ Election of office bearers of Vipra Samaj's Chidambaram Seva Committee

ದೇವರ ಹಿಪ್ಪರಗಿ 27 : ಪಟ್ಟಣದ ವಿಪ್ರ ಸಮಾಜದ  ಚಿದಂಬರ ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ನರೇಂದ್ರ ಕೆ.ನಾಡಗೌಡ, ಉಪಾಧ್ಯಕ್ಷರಾಗಿ  ವೆಂಕಟೇಶ ಕುಲಕರ್ಣಿ, ಕಾರ್ಯದರ್ಶಿಯಾಗಿ ಚಿದಂಬರ ಕುಲಕರ್ಣಿ ಅವರನ್ನು ಅವಿರೋಧವಾಗಿ ಆಯ್ಕೆಯಾದರು. ನಂತರ ಪದಾಧಿಕಾರಿಗಳನ್ನು ಹನುಮ ಜಯಂತಿ ದಿನದಂದು ಉಳಿದಿರುವ ಪದಾಧಿಕಾರಿಗಳನ್ನು ಆಯ್ಕಆಯ್ಕೆ ಮಾಡಲಾಗುವುದೆಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿಪ್ರ ಸಮಾಜದ ಸಮಿತಿಯ ಮಾಜಿ ಅಧ್ಯಕ್ಷರಾದ ಡಾ.ಆರ್‌.ಆರ್‌. ನಾಯಕ, ಪಾಂಡುರಂಗ ದೇಶಪಾಂಡೆ, ಪ್ರಮೋದ ನಾಡಗೌಡ, ಮಾಜಿ ಕಾರ್ಯದರ್ಶಿ ಗುರುರಾಜ ಕುಲಕರ್ಣಿ, ಶರತ ಕುಲಕರ್ಣಿ, ಡಿ.ಜಿ.ದೇಶಪಾಂಡೆ, ಸುಧೀರ ಪಾಟೀಲ, ರಾಘವೇಂದ್ರ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಹಲವಾರು ಜನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಸನ್ಮಾನ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಧರ್ ನಾಡಗೌಡ್ರು ನಿರ್ವಹಿಸಿದರು. ವಂದನಾರೆ​‍್ಣ ಪ್ರಲ್ಹಾದ  ಕುಲಕರ್ಣಿ ಅವರು ನೆರವೇರಿಸಿದರು.