ಡಾ. ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ ಬಲಿದಾನ ಬಹಳ ದೊಡ್ಡದು

ಡಾ.  ಶ್ಯಾಮ ಪ್ರಸಾದ ಮುಖರ್ಜಿ ತ್ಯಾಗ ಬಲಿದಾನ ಬಹಳ ದೊಡ್ಡದು Dr. Shyama Prasad Mukherjee's sacrifice is very great

ಬೆಳಗಾವಿ 24:  ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ತ್ಯಾಗ, ಬಲಿದಾನದಿಂದ ಇಂದು ಆರ್ ಎಸ್ ಎಸ್  ಇಷ್ಟು ದೊಡ್ಡ ಮಟ್ಟದ ಬೆಳವಣಿಗೆಗೆ ಹಾಗೂ ದೇಶದಲ್ಲಿ ಆರ್ ಎಸ್ ಎಸ್ ಪಾತ್ರದ ಹಾಗೂ ದೇಶದ ಬೆಳವಣಿಗೆಗೆ ಡಾ ಶ್ಯಾಮ್ ಅವರು  ಕಾರಣಿ ಭೂತರು   ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ  ಹೇಳಿದರು. ಅವರು ಮಗಳವಾರದಂದು    ಡಾ ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನದ ಅಂಗವಾಗಿ ಇಂದು ಭಾಜಪಾ ಬೆಳಗಾವಿ ಮಹಾನಗರ ಕಾರ್ಯಾಲಯದಲ್ಲಿ  ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಜೊತೆಗೆ ಗೌರವ ಸಲ್ಲಿಸಲಾಯಿತು.      ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಜಿಲ್ಲೆಯ ಅಧ್ಯಕ್ಷರಾದ  ಶ್ರೀಮತಿ ಗೀತಾ ಸುತಾರ , ಬೆಳಗಾವಿ ದಕ್ಷಿಣ  ಶಾಸಕರಾದ ಅಭಯ ಪಾಟೀಲ , ಜಿಲ್ಲಾ ಉಪಾಧ್ಯಕ್ಷರಾದ  ಮಹಾಂತೇಶ ವಕ್ಕುಂದ, ಹಿರಿಯರಾದ ಎಂ ಬಿ ಜಿರಲಿ , ರಾಜ್ಯ  ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ , ಉಪಮಹಾಪೌರರಾದ ಹಣಮಂತ ಕೊಂಗಾಲಿ, ಮುರುಗೇಂದ್ರಗೌಡ ಪಾಟೀಲ   ಸೇರಿದಂತೆ ಪ್ರಮುಖ ಗಣ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.