ಡಾ. ನಾಗಲೋಟಿಮಠ ಸಾಧನೆ ಅವಿಸ್ಮರಣೀಯ: ಗುರುಸಿದ್ಧ ಸ್ವಾಮೀಜಿ

ಡಾ. ನಾಗಲೋಟಿಮಠ ಸಾಧನೆ ಅವಿಸ್ಮರಣೀಯ: ಗುರುಸಿದ್ಧ ಸ್ವಾಮೀಜಿ Dr. Nagalotimath's achievement is unforgettable: Gurusiddha Swamiji

ಬೆಳಗಾವಿ 18: ಡಾ. ಸ.ಜ.ನಾಗಲೋಟಿಮಠ ತಮ್ಮ ಸಾಧನೆಯಿಂದ ಬೆಳಗಾವಿಗೆ ರಾಷ್ಟ್ರಮಟ್ಟದ ಕೀರ್ತಿ ತಂದುಕೊಟ್ಟ ಧೀಮಂತರು. ಅವರ ಸಾಧನೆ ಅವಿಸ್ಮರಣೀಯ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು. 

ಅವರು ಬೆಳಗಾವಿ ನಗರದ ಬಸವ ಕಾಲನಿಯಲ್ಲಿ ಡಾ. ಸ. ಜ. ನಾಗಲೋಟಿಮಠ ಅವರ ಮೂರ್ತಿ ಅನಾವರಣ ನೆರವೇರಿಸಿ ಮಾತನಾಡಿದರು. ಅನಾಮಧೇಯ ಹಿನ್ನೆಲೆಯಿಂದ ಬಂದ ಡಾ. ನಾಗಲೋಟಿಮಠ ಅವರು ತೀವ್ರ ಬಡತನದಲ್ಲಿಯೂ ಅವಿರತ ಪ್ರಯತ್ನ ಪಟ್ಟು ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯವಾದ ಸಾಧನೆ ಮಾಡಿ ಯುವ ಜನಾಂಗಕ್ಕೆ ಆದರ್ಶಪ್ರಾಯರು ಎಂದು ಹೇಳಿದರು. 

ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಡಾ. ನಾಗಲೋಟಿಮಠರ ಬಹುಮುಖ ವ್ಯಕ್ತಿತ್ವ ಕುರಿತು ಮಾತನಾಡುತ್ತ ಡಾ. ನಾಗಲೋಟಿಮಠ ಅವರು ನಮ್ಮ ಶ್ರೀಮಠದ ಆವರಣದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಿ ಈ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿದವರು ಎಂದು ಹೇಳಿದರು. 

ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಸವ ಕಾಲನಿ ರಹವಾಸಿಗಳು ಗೌರವಾಭಿನಂದನ ಪತ್ರ ಸಮರ​‍್ಿಸಿ ಗೌರವಿಸಿದರು. ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಮಂಗೇಶ್ ಪವಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅನಿಲ ಬೆನಕೆ, 

ಮಾಜಿ ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಕದಂ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ,  ಮಹಾಂತೇಶ ವಕ್ಕುಂದ, ಶಾಂತಾ ನಾಗಲೋಟಿಮಠ, ಸುನಿತಾ ನಾಗಲೋಟಿಮಠ ಇಂಪನಾ ನಾಗಲೋಟಿಮಠ ಉಪಸ್ಥಿತರಿದ್ದರು. 

ಬಸವ ಕಾಲನಿ ರಹವಾಸಿಗಳ ಸಂಘದ ಅಧ್ಯಕ್ಷ ಕೆ. ಆಯ್‌. ಗಾಣಿಗೇರ ಅವರು ಸ್ವಾಗತಿಸಿದರು. ಬಸವರಾಜ ಹಳಿಂಗಳಿ ನಿರೂಪಿಸಿದರು. ಉಮಾ ಕರಜಗಿಮಠ ವಂದಿಸಿದರು.