ಕ್ಯಾನ್ಸರ್ ಕುರಿತು ಭಯ ಬೇಡ, ಜಾಗೃತಿ ಅಗತ್ಯ

ಕ್ಯಾನ್ಸರ್  ಕುರಿತು ಭಯ ಬೇಡ, ಜಾಗೃತಿ ಅಗತ್ಯ  Don't be afraid of cancer, awareness is needed

ಬೆಳಗಾವಿ  04: ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅನಗತ್ಯ ಭಯ ಹೊಂದುವ ಅಗತ್ಯವಿಲ್ಲ.ಸರಿಯಾದ ಮಾಹಿತಿ ಮತ್ತು ಸಮಯೋಚಿತ ತಪಾಸಣೆ ಮೂಲಕ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಜಾಗೃತಿ ಕಾರ್ಯಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ರೋಗ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ. ಆರೋಗ್ಯಕರ ಜೀವನಶೈಲಿ ಮತ್ತು ತಂಬಾಕು ದೂರವಿಡುವುದು ಅತ್ಯಂತ ಮುಖ್ಯ. ಭಯಕ್ಕಿಂತ ಜಾಗೃತಿಯೇ ಕ್ಯಾನ್ಸರ್ ವಿರುದ್ಧದ ಶಕ್ತಿಯುತ ಆಯುಧವಾಗಿದೆ ಎಂದು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಸಂತಾನಿ ದಂಡಿನ ಅಭಿಪ್ರಾಯ ಪಟ್ಟರು.  

ಬೆಳಗಾವಿ ನಗರದ ಕನಬರಗಿಯಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಹಿಂಡಾಲ್ಕೊ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಂಯುಕ್ತ ಕ್ಯಾನ್ಸರ್ ತಪಾಸಣೆ ಹಾಗೂ ಜಾಗೃತಿ ಶಿಬಿರ  ಜರುಗಿತು. ಶಿಬಿರದಲ್ಲಿ ಮಹಿಳೆಯರಿಗೆ ಸ್ಕ್ರೀನಿಂಗ್ ಮೂಲಕ ಕ್ಯಾನ್ಸರ್ ತಪಾಸಣೆ ನಡೆಸಲಾಗಿದ್ದು, ಮ್ಯಾಮೋಗ್ರಾಫಿ ಮೂಲಕ ಸ್ತನ ಕ್ಯಾನ್ಸರ್ ಪರೀಕ್ಷೆಯನ್ನೂ ಕೈಗೊಳ್ಳಲಾಯಿತು. ಇದೇ ವೇಳೆ ಪುರುಷರಿಗೆ ಬಾಯಿ ಹಾಗೂ ಗಂಟಲು ಕ್ಯಾನ್ಸರ್ ಸಂಬಂಧಿತ ತಪಾಸಣೆಗಳನ್ನೂ ನಡೆಸಲಾಯಿತು.  

ಕೆ.ಎಲ್‌.ಇ. ಕ್ಯಾನ್ಸರ್ ಆಸ್ಪತ್ರೆಯ ನುರಿತ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ತಪಾಸಣಾ ಕಾರ್ಯವನ್ನು ಪರಿಣಾಮಕಾರಿಯಾಗಿ ನೆರವೇರಿಸಿತು. ಶಿಬಿರದ ಪ್ರಯೋಜನವನ್ನು ಸುಮಾರು 150ಕ್ಕೂ ಹೆಚ್ಚು ಜನರು ಪಡೆದುಕೊಂಡರು.  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಸಿಬ್ಬಂದಿ, ನಗರ ಕುಟುಂಬ ಕಲ್ಯಾಣ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು, ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು.  

 ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವೈಜಯಂತಿ ಚೌಗಲಾ ಅವರು ಉಪಸ್ಥಿತರಿದ್ದರು. ಕೆ.ಎಲ್‌.ಇ. ಸಂಸ್ಥೆಯಿಂದ ಡಾ. ಆಸ್ಫಿಯಾ (ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗ ಹಿ ವೈದ್ಯ ಸಹಾಯಕಿ), ಡಾ. ದೃಷ್ಠಿ ಪಾಟೀಲ (ಸ್ತನ ಆಂಕೋ ಶಸ್ತ್ರಚಿಕಿತ್ಸೆ ವಿಭಾಗ ಹಿ ಶಸ್ತ್ರಚಿಕಿತ್ಸಕಿ) ಹಾಗೂ ಡಾ. ಸ್ವಾತಿ ಗೌಡರ್ (ಶಸ್ತ್ರಚಿಕಿತ್ಸಾ ಗೈನಕಾಲಜಿಕಲ್ ಆಂಕಾಲಜಿ ವಿಭಾಗ ಹಿ ಸಹಾಯಕ ಪ್ರಾಧ್ಯಾಪಕಿ) ಅವರು ತಪಾಸಣಾ ಕಾರ್ಯಕ್ಕೆ ಮುಂದಾಳತ್ವ ವಹಿಸಿದ್ದರು. ಕೆ.ಎಲ್‌.ಇ. ಕ್ಯಾನ್ಸರ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್‌.ಒ) ಶ್ರೀ ಬಸವರಾಜ ಮಾದರ ಅವರು ಸಹ ಶಿಬಿರದ ಯಶಸ್ಸಿಗೆ ಸಹಕರಿಸಿದರು.