ಶಿಕ್ಷಕರ ದಿನಾಚರಣೆ ನಿಮಿತ್ಯ ಮಕ್ಕಳಿಗೆ ಸಾಹಿತ್ಯ ಪುಸ್ತಕ ವಿತರಣೆ

ಶಿಕ್ಷಕರ ದಿನಾಚರಣೆ ನಿಮಿತ್ಯ ಮಕ್ಕಳಿಗೆ ಸಾಹಿತ್ಯ ಪುಸ್ತಕ ವಿತರಣೆ Distribution of literature books to children on the occasion of Teachers' Day

ಸಂಬರಗಿ 07:ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದಾಗ ಸ್ವಂತ ದುಡ್ಡಿನಿಂಗ ಮಕ್ಕಳಿಗೆ ಶಾಲೆಯ ಸಾಹಿತ್ಯ ಪುಸ್ತಕಗಳನ್ನು ನೀಡಿ ಜಂಬಗಿ ಗ್ರಾಮದ ಮಾಳಿ ನಗರ ತೋಟದ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು ಕೈಲಾಸ ಸುಭಾಷ ಮದಭಾವಿ ಇವರಿಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಶೈಕ್ಷಣಿಕ ಜಿಲ್ಲಾ ಚಿಕ್ಕೋಡಿ ಉಪನಿರ್ದೇಶಕರಾದ ಸೀತಾರಾಮ, ಶಾಸಕ ಗಣೇಶ ಹುಕ್ಕೇರಿ ಹಾಗೂ ತಹಶೀಲ್ದಾರ ರಾಜೇಶ ಬುರ್ಲಿ ಇವರ ಹಸ್ತದಿಂದ ಸತ್ಕರಿಸಲಾಯಿತು. 

ಗಡಿ ಭಾಗದಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳು ಮಕ್ಕಳ ಸಂಖ್ಯೆಯ ಕೊರತೆಯಿಂದ ಸ್ಥಗಿತಗೊಳ್ಳುತ್ತಿವೆ. ಆದರೆ ಕೈಲಾಸ ಮದಭಾವಿ ಇವರು ಪ್ರತಿ ವರ್ಷ ಶಾಲೆಗಳಿಗೆ ಇಪ್ಪತ್ತುಸಾವಿರ ರೂಪಾಯಿಗಳ ಸ್ವಂತ ಹಣವನ್ನು ಖರ್ಚು ಮಾಡಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಿದ್ದಾರೆ. ಈ ತೋಟದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿತ್ತು. ಆದರೆ ಇವರ ಸತತ ಪ್ರಯತ್ನದಿಂದ ಈ ವರ್ಷ ಮಕ್ಕಳ ಸಂಖ್ಯೆ 40ರ ಮೇಲ್ಪಟ್ಟು ಹೋಗಿದೆ. ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಶಿಕ್ಷಕರ ದಿನಾಚರಣೆಯ ನಿಮಿತ್ಯವಾಗಿ ಅವರನ್ನು ಚಿಕ್ಕೋಡಿಯಲ್ಲಿ ಸತ್ಕರಿಸಲಾಯಿತು.  

ಈ ವೇಳೆ ಶಾಲಾ ಸುಧಾರಣಾ ಸಮೀತಿಯ ಅಧ್ಯಕ್ಷರಾದ ಅಕಾರಾಮ ನಾಯಕು ಮಾಳಿ ಇವರನ್ನು ಸಂಪರ್ಕಿಸಿದಾಗ ಕೈಲಾಸ ಮದಭಾವಿ ಇವರು ನೌಕರಿಗೆ ಹಾಜರಾದ ದಿನದಿಂದ ಇಲ್ಲಿಯ ವರೆಗೆ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸರಕಾರ ಪರಿಗಣಿಸಿ 5ನೇ, 6ನೇ, 7ನೇ ತರಗತಿಯನ್ನು ಪ್ರಾರಂಭ ಮಾಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.