ಬಿಎಸ್ಎನ್ಎಲ್ ನೌಕರರ ಪತ್ತಿನ ಸಹಕಾರಿ ಸಂಘಕ್ಕೆ ಚುನಾಯಿತಗೊಂಡ ನಿರ್ದೇಶಕರು
Directors elected to BSNL Employees' Cooperative Society
ಬಿಎಸ್ಎನ್ಎಲ್ ನೌಕರರ ಪತ್ತಿನ ಸಹಕಾರಿ ಸಂಘಕ್ಕೆ ಚುನಾಯಿತಗೊಂಡ ನಿರ್ದೇಶಕರು
ಕೊಪ್ಪಳ 15: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ನೌಕರರ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಒಟ್ಟು 13 ಸ್ಥಾನ ದಲ್ಲಿ 12 ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಆಡಳಿತ ಮಂಡಳಿ ನೂತನ ನಿರ್ದೇಶಕರುಗಳಾಗಿ ಚುನಾಯಿತ ಗೊಂಡ ನಿರ್ದೇಶಕರ ವಿವರ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿಎಸ್ಎನ್ಎಲ್ ನಿಗಮ ಕೊಪ್ಪಳದ ಅಧೀಕ್ಷಕರಾದ ಅನಿಲ್ ಕುಮಾರ್ ಅವರು ಚುನಾವಣಾ ಫಲಿತಾಂಶ ಘೋಷಿಸಿದರು, ಸಂಘದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಡಳಿತ ಮಂಡಳಿ ನಿರ್ದೇಶಕರಾಗಿ ರಾಯಚೂರಿನ ಜಿಲಾನಿ ಭಾಷಾ, ಬಳ್ಳಾರಿಯಿಂದ ಪಿ.ವಿ. ಪ್ರಸಾದ ರಾವ್, ಕೊಪ್ಪಳದ ಮೊಹಮ್ಮದ್ ತಾಜುದ್ದಿನ, ಲಿಂಗಸೂರಿನ ಎಲ್. ಶರಣಪ್ಪ ಗೌಡ, ಯಲಬುರ್ಗಾದ ಶೇಕ್ ಮಸ್ತಾನ್, ಸಿಂಧನೂರಿನ ಕೆ. ನಾಗೇಂದ್ರ ಕುಮಾರ್ ಮತ್ತು ಎಚ್. ಎಂ. ರೇಣುಕಯ್ಯ ಸ್ವಾಮಿ ಚುನಾಯಿತಗೊಂಡಿದ್ದು ಪರಿಶಿಷ್ಟ ಜಾತಿ ಸ್ಥಾನದಿಂದ ರಾಯಚೂರಿನ ನಾಗರಾಜ್ ಒಡೆಯರ್, ಪರಿಶಿಷ್ಟ ಪಂಗಡದ ಸ್ಥಾನದಿಂದ ಕೊಪ್ಪಳದ ಅಶೋಕ್ ವಾಲ್ಮೀಕಿ, ಮಹಿಳಾ ಕ್ಷೇತ್ರ ಸ್ಥಾನದಿಂದ ಹೊಸಪೇಟೆಯ ಲೀಲಾ ಕ್ಲ್ಯಾರಿ ಡಿಬೇಲ್ ಮತ್ತು ಯಲಬುರ್ಗಾ ಅನಿತಾ ಸೊಪ್ಪಿಮಠ ಹಾಗೂ ಹಿಂದುಳಿದ ವರ್ಗ ಕ್ಷೇತ್ರದಿಂದ ಕೊಪ್ಪಳದ ಶ್ರೀನಿವಾಸ್ ಕುರುಗೋಡ್ ರವರು ಆಡಳಿತ ಮಂಡಳಿ ನಿರ್ದೇಶಕರುಗಳಾಗಿ ಚುನಾಯಿತಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿರುವ ಬಿಎಸ್ಎನ್ ಎಲ್ ನಿಗಮ ಕೊಪ್ಪಳದ ಅಧೀಕ್ಷಕ ಅನಿಲ್ ಕುಮಾರ್ ರವರು ಘೋಷಿಸಿ ಒಂದು ಸ್ಥಾನ ಖಾಲಿ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 