ಹುಂಬಿ ಅವರ ಕುಟುಂಬದ ಶುಭ ವಿವಾಹ ಆರತಕ್ಷತೆಯಲ್ಲಿ ಗಣ್ಯರು ಭಾಗಿ
Dignitaries attend Humbi's family's auspicious wedding reception
ಹುಬ್ಬಳ್ಳಿ 17 : ತಬಲಾ ಕಲಾವಿದರು , ಜೈ ಹನುಮಾನ್ ರೋಡ್ ಲೈನ್ಸ್ ಮತ್ತು ಬಿ ಎಚ್ ಬ್ರಿಕ್ಸ್ ನ ಮಾಲೀಕರಾದ ಮಂಜುನಾಥ ವೀರ್ಪ ಹುಂಬಿ ಅವರ ಕುಟುಂಭದ ಶುಭ ವಿವಾಹ ಮುನ್ನಾದಿನ ನಡೆದ ಆರತಕ್ಷತೆ ಕಾರ್ಯಕ್ರಮ ಕೆಇಬಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೇರವೇರಿತು. ನವ ವಧುವರರಾದ ಜಯಲಕ್ಷ್ಮಿ ಹಾಗೂ ವೀರೇಂದ್ರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಸದಸ್ಯರು ಗ್ರಂಥ ನೀಡಿ ಶುಭ ಕೋರಿದರು. ಗಣ್ಯರು ಶುಭಾಶೀರ್ವದಿಸಿದರು. ಭಾವಿ ಜೀವನ ಯಶಸ್ವಿಯಾಗಿ ನೆರವೆರಲಿ ಎಂದು ಶುಭ ಕೋರಿದರು. ಖ್ಯಾತ ನ್ಯಾಯವಾದಿ, ಲಿಂಗಾಯತ ಸಮಾಜದ ದುರೀಣರು, ಹಿರಿಯರಾದ ಮೋಹನ ಲಿಂಬಿಕಾಯಿ , ಸೋಹನ್ ಸುರೇಶ್ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ನಿಖಿಲ್ ಲಿಂಗರಾಜ ಹೊರಕೇರಿ, ಡಾ ಸೋಮಶೇಖರ ಹುದ್ದಾರ್, ಡಾ ಎಚ್ ವಿ ಬೆಳಗಲಿ, ರಾಜೇಶ್ವರಿ ಹುಂಬಿ, ಮಂಜುನಾಥ ಹುಂಬಿ, ಪ್ರೊ ನಂದೀಶ ಹುಂಬಿ, ನಂದಕುಮಾರ್ ಪಾಟೀಲ್, ಪ್ರಿಯಾ ಹುಂಬಿ, ವಿ.ಜಿ.ಪಾಟೀಲ್, ಗುರುಸಿದ್ದಪ್ಪ ಬಡಿಗೇರ, ಮಲ್ಲಿಕಾರ್ಜುನ ಕಮ್ಮಾರ, ಸೇರಿದಂತೆ ಹುಂಬಿ ಹಾಗೂ ಉಮಚಗಿ ಬಂಧುಗಳು, ಗೆಳೆಯರು, ಮುಂತಾದವರು ಭಾಗವಸಿದ್ದರು.ಪ್ರಿಯಾ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 