ವಿದ್ಯುತ್ ಕಂಬಗಳ ಬದಲಾವಣೆ ರೈತರ ಪರಿವರ್ತಕ ಬಗ್ಗೆ ಗ್ರಾಹಕರ ಸಂವಾದ ಕಾರ್ಯಕ್ರಮ

ವಿದ್ಯುತ್ ಕಂಬಗಳ ಬದಲಾವಣೆ ರೈತರ ಪರಿವರ್ತಕ ಬಗ್ಗೆ ಗ್ರಾಹಕರ ಸಂವಾದ ಕಾರ್ಯಕ್ರಮ           Customer interaction program about changing electricity poles and farmers' transformers

                                                  

ಕಂಪ್ಲಿ 18 : ಪಟ್ಟಣದ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ಏರಿ​‍್ಡಸಿದ್ದ ಗ್ರಾಹಕರ ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು.ಪಟ್ಟಣದ ವಿನಾಯಕ ನಗರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮೇಲಿಂದ ಮೇಲೆ ವಿದ್ಯುತ್ ಕಡಿತವಾಗುತ್ತಿದೆ. ಮಡ್ಡಿಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಕಬ್ಬಿಣ ವಿದ್ಯುತ್ ಕಂಬಗಳ ಬದಲಾವಣೆ, ಪಟ್ಟಣ ಪ್ರದೇಶವೂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ, ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಗಳ ಬದಲಾವಣೆ. ಕೆಳಮಟ್ಟದಲ್ಲಿರುವ ವಿದ್ಯುತ್ ಪರಿವರ್ತಕಗಳನ್ನು ಮೇಲೇರಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.ಇದಕ್ಕೆ ಸ್ಪಂದಿಸಿದ ಕಂಪ್ಲಿ ಉಪವಿಭಾಗದ ಜೆಸ್ಕಾಂ ಎಇಇಕೆ.ಶ್ರೀನಿವಾಸ ಪ್ರಸಾದ್, ಸಾರ್ವಜನಿಕರ ಸಮಸ್ಯೆಗಳು ಹಾಗೂ ಸಲಹೆ ಸೂಚನೆಗಳ ಬಗ್ಗೆ ತಕ್ಷಣದಿಂದಲೇ ಪರೀಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರಲ್ಲದೆ, ಕಾಂಕ್ರೀಟ್ ವಿದ್ಯುತ್ ಕಂಬಗಳಿಗಿಂತ ಕಬ್ಬಿಣದ ಕಂಬಗಳೇ ಉತ್ತಮವಾಗಿವೆ.ಈಗಿನ ಸಿಮೆಂಟ್ ಕಂಬಗಳು ಕೇವಲ 9 ಮೀ.ಉದ್ದ ಇರುತ್ತವೆ. ಹಳೆಯ ಕಬ್ಬಿಣದ ಕಂಬಗಳು 12 ಮೀ.ಇರುವುದರಿಂದ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಅನುಕೂಲವಾಗಿವೆ. ಆದರೆ ಕಬ್ಬಿಣದ ಕಂಬಗಳ ಹತ್ತಿರ ವಿದ್ಯುತ್ ಶಾರ್ಟ್‌ ಆಗದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಮತ್ತು ಕೆಳಗಡೆ ಇರುವ ವಿದ್ಯುತ್ ಪರಿವರ್ತಕಗಳನ್ನು 5 ಮೀ.ಮೇಲೆ ಅಳವಡಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಎಇ ಗಳಾದ ವಿನೋದ ಬ್ಯಾಲ್ಯಾಳು, ಭೀಮೇಶ್,ಮಹಾಂತಪ್ಪ ತುಂಬದ್ ಹಾಗೂ ಸಿಬ್ಬಂದಿಗಳು ಇದ್ದರು.