ಪಾಲಕರ ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲೆ ಇದೆ: ಡಾ. ಮುತ್ನಾಳಿ

Children have the responsibility to make their parents' dreams come true: Dr. Muthnali

ರಾಯಬಾಗ, 14 : ತಂದೆ-ತಾಯಿ ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲೆ ಇದೆ ಎಂದು ಚಿಕ್ಕೋಡಿ ಕೆ.ಎಲ್‌.ಇ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಹೇಳಿದರು. 

ಶನಿವಾರ ಪಟ್ಟಣದ ಕೆ.ಎಲ್‌.ಇ ಸಂಸ್ಥೆಯ ಮಲಗೌಡ ಪಾಟೀಲ ಪಿ.ಯು ಕಾಲೇಜಿನ ಪ್ರಥಮ ವರ್ಷದ ಪಿ.ಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಸುಂದರವಾಗಿಸಲು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ದೇಶದ ಜನಸಂಖ್ಯೆ ಅನುಗುಣವಾಗಿ ವೈದ್ಯರು ಇಲ್ಲದಿರುವುದರಿಂದ ವಿಜ್ಞಾನ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಆಯುರ್ವೇದ ವೈದ್ಯಕೀಯದಲ್ಲಿ ಸಾಕಷ್ಟು ಅವಕಾಶಗಳಿವೆ, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಪ್ರಾಚಾರ್ಯ ಡಾ.ಆರ್‌.ಕೆ.ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು. 2024-25 ನೇ ಸಾಲಿನಲ್ಲಿ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಎ.ಎಮ್‌.ಕುಲಗುಡೆ, ಸದಸ್ಯರಾದ ಡಿ.ಎಲ್‌.ಮಿರ್ಜೆ, ಎಮ್‌.ಎಮ್‌.ನಿಶಾನದಾರ, ವಿ.ಪಿ.ಪಾಟೀಲ, ಎಲ್‌.ಬಿ.ಪಾಟೀಲ, ಉಪನ್ಯಾಸಕರಾದ ಎಸ್‌.ಎ.ಖವಟಕೋಪ್ಪ, ಆರ್‌.ಎಸ್‌.ಬುಗಡಿಕಟ್ಟಿ, ಎಮ್‌.ಡಿ.ಶಿಂಗಾಡಿ, ಎಸ್‌.ಎಸ್‌.ಮಂಗಾವತಿ, ವಿ.ಎ.ಮಂಡಕಿ, ಎಮ್‌.ಆರ್‌.ಹೊಸಮನಿ, ಎ.ಎ.ಶೆಟ್ಟಿ ಹಾಗೂ ವಿದ್ಯಾರ್ಥಿಗಳು ಇದ್ದರು.ಪಿ.ಪಿ.ಪವಾರ ಸ್ವಾಗತಿಸಿ, ನಿರೂಪಿಸಿದರು, ಎ.ಜಿ.ಹಂಜೆ ವಂದಿಸಿದರು. 


ಇತ್ತೀಚಿನ ಸುದ್ದಿ