ಬೇಸಿಗೆಯ ಚಿಣ್ಣರ ಮೇಳದಿಂದ ಮಕ್ಕಳ ವ್ಯಕ್ತಿತ್ವ ವಿಕಾಸನ
Children's personality development through summer children's fair
ಲೋಕದರ್ಶನ ವರದಿ
ಹೂವಿನಹಡಗಲಿ 16- ಶಾಲೆಯ ಓಪಚಾರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗದ ಆಸಕ್ತಿಯ ಅನೇಕ ವಿಷಯಗಳನ್ನು ಕಲಿಯಲು ಬೇಸಿಗೆ ಶಿಬಿರದ ಚಿಣ್ಣರ ಮೇಳ ಅವಕಾಶ ಮಾಡಿಕೊಡುತ್ತದೆ ಎಂದು ತಹಶಿಲ್ದಾರರ ಕೆ.ಎಂ.ಗುರುಬಸವರಾಜ ಹೇಳಿದರು. ಪಟ್ಟಣದ ರಂಗಭಾರತಿ ರಂಗಮಂದಿರ ದಲ್ಲಿ ಗುರುವಾರ ಆಯೋಜಿಸಿರುವ ಬೇಸಿಗೆಯ ಚಿಣ್ಣರ ಮೇಳ ಇದು ಉದ್ಘಾಟಿಸಿ ಮಾತನಾಡಿ ರಜಾ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಿಣ್ಣರ ಮೇಳದಲ್ಲಿ ಹಾಡು,ಸಂಗೀತ, ನಲಿ-ಕಲಿ ಮತ್ತುಕೌಶಲ ಕಲಿಕೆಗೆ ವೇದಿಕೆ ಒದಗಿಸುತ್ತದೆ ಎಂದರು.
ಮೈಸೂರು ರಂಗಾಯಣ ರಂಗಕರ್ಮಿ ಹುಲಗಪ್ಪ ಕಟ್ಟಿಮನಿ ಮಾತನಾಡಿ ಎಂ.ಪಿ.ಪ್ರಕಾಶ್ ರು ರಂಗಭಾರತಿ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹ ನೀಡಿದ್ದಾರೆ ಜತೆಗೆ ಶಾಲೆಯಲ್ಲಿ ಕಲಿಯದ ವಿಷಯ ಚಿಣ್ಣರ ಮೇಳದಲ್ಲಿ ನಾಟಕ,ರಂಗ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ಸಂಕೋಚ ದೂರವಾಗಿ , ಆತ್ಮ ವಿಶ್ವಾಸ ಮತ್ತು ಶಿಸ್ತು ಹೆಚ್ಚುತ್ತದೆ ಎಂದರು.ರಂಗಭಾರತಿ ಕಾರ್ಯದ್ಯಕ್ಷೆ ಎಂ.ಪಿ.ಸುಮಾ, ಎಂ.ಪಿ.ಪಿ.ಸಮಾಜ ಮುಖಿ ಟ್ರಸ್ಟ್ ಅದ್ಯಕ್ಷೆ ಎಂ.ಪಿ.ವೀಣಾ,ಉಪನ್ಯಾಸಕ ಪ್ರಭು ಸೊಪ್ಪಿನ , ಶಿಬಿರದ ನಿರ್ದೇಶಕ ಆನಂದ, ಶಿಕ್ಷಕರಾದ ಕೊಟ್ರಸ್ವಾಮಿ.ಚಂದ್ರ್ಪ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 