ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ : ಸದುಪಯೋಗಕ್ಕೆ ಕರೆ
Children's all-round personality development camp: A call for good use
ಕೊಪ್ಪಳ 04: ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದು ಸುವರ್ಣ ಅವಕಾಶ,ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣವಷ್ಟೇ ಅಲ್ಲ, ಉತ್ತಮ ಸಂಸ್ಕಾರವೂ ಅತ್ಯಗತ್ಯ. ಮಕ್ಕಳ ಎಳೆಯ ಮನಸ್ಸಿನಲ್ಲಿ ಮೌಲ್ಯಗಳನ್ನು ಬಿತ್ತಿ, ಅವರನ್ನು ಸಶಕ್ತ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ...* "ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ ಇದೆ ದಿ, 5 ರಿಂದ 11ರ ವರೆಗೆ ಮಕ್ಕಳಿಗಾಗಿ ವ್ಯಕ್ತಿತ್ವ ವಿಕಾಸ ಶಿಬಿರ ಜರುಗಲಿದೆ ಇದರ ಸದುಪಯೋಗ ಪಡೆದು ಕೊಳ್ಳಲು ಕೊಪ್ಪಳ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ನವರು ಪ್ರಕಟಣೆಯಲ್ಲಿ ತಿಳಿಸಿ ಎಲ್ಲಾ ಮಕ್ಕಳಿಗೆ ಸ್ವಾಗತಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು ಶಿಬಿರದ ಪ್ರಮುಖ ಉದ್ದೇಶಗಳು: ಮೊಬೈಲ್ ನ ಆರೋಗ್ಯಕರ ಬಳಕೆನೈತಿಕ ಮೌಲ್ಯಗಳ ಜಾಗೃತಿ. ಮನಸ್ಸಿನ ಏಕಾಗ್ರತೆ ಹಾಗೂ ದೃಢತೆಯನ್ನು ಹೆಚ್ಚಿಸುವುದು. ಎಂಥಹುದೇ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯ ಬೆಳೆಸುವುದು. ಆಧ್ಯಾತ್ಮಿಕತೆಯ ಬುನಾದಿಯ ಮೇಲೆ ನವ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವುದು. ಶಿಬಿರದ ವಿವರಗಳು: ವಯೋಮಿತಿ: 12 ರಿಂದ 16 ವರ್ಷದ ವಿದ್ಯಾರ್ಥಿಗಳಿಗೆ ದಿ: 05- ರಿಂದ 11 ರ ವರೆಗೆ ಸಮಯ: ಬೆಳಿಗ್ಗೆ 09:00 ರಿಂದ ಮಧ್ಯಾಹ್ನ 12:00 ರವರೆಗೆಬ್ರಹ್ಮಕುಮಾರೀಸ್ ದೇವರಾಜ್ ಅರಸ್ ಕಾಲೋನಿ, ಸಾಲಾರ್ ಜಂಗ್ ರೋಡ್ ಕೊಪ್ಪಳ ಸಂಪರ್ಕಿಸಿ: 9482610488 ನೋಂದಣಿ ಹೇಗೆ?
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಮೇಲಿರುವ ಸೇವಾಕೇಂದ್ರದ ವಾಟ್ಸಾಪ್ ಸಂಖ್ಯೆಗೆ ಈ ಕೆಳಗಿನ ಮಾಹಿತಿಯನ್ನು ಕಳುಹಿಸಿ: ವಿದ್ಯಾರ್ಥಿಯ ಹೆಸರು ಓದುತ್ತಿರುವ ತರಗತಿ ಶಾಲೆಯ ಹೆಸರು ಸಂಪೂರ್ಣ ವಿಳಾಸಬನ್ನಿ, ಮಕ್ಕಳ ಭವಿಷ್ಯವನ್ನು ಒಟ್ಟಾಗಿ ರೂಪಿಸೋಣ. ದಯವಿಟ್ಟು ಈ ಸಂದೇಶವನ್ನು ತಮ್ಮ ತಮ್ಮ ಗ್ರೂಪ್ ಗಳಿಗೆ ಶೇರ್ ಮಾಡಿ ಮಕ್ಕಳಿಗೆ ತಿಳಿಸಿರಿ ಹಾಗೂ ಆಪ್ತರಿಗೂ ಶೇರ್ ಮಾಡಿ ಎಂದು ಕೊಪ್ಪಳ ನಗರದ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 